newsics.com
ಕೊಡಗಿನಲ್ಲಿ ಮಳೆ ಪ್ರಮಾಣ ತಗ್ಗಿದ್ದರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಕಾವೇರಿ ನದಿ ಮೂಲಕ ಬಿಡುತ್ತಿದ್ದ ಹೊರ ಹರಿವಿನ ಪ್ರಮಾಣವನ್ನು ತಗ್ಗಿಸಲಾಗಿದೆ.
ಮೈಸೂರು ಜಿಲ್ಲೆಯ ಎಚ್ಡಿಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೂ ಒಳ ಹರಿವು ಚೆನ್ನಾಗಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕೊಂಚ ಕಡಿಮೆಯೇ ಆಗಿದೆ. ಮಂಗಳವಾರ ರಾತ್ರಿ ಜಲಾಶಯದಲ್ಲಿ 2282.82 ಅಡಿ ನೀರು ಸಂಗ್ರಹವಾಗಿದೆ.ಜಲಾಶಯದ ಗರಿಷ್ಠ ಮಟ್ಟವು 2284 ಅಡಿ. ಈಗ ಜಲಾಶಯಕ್ಕೆ 17,877 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹೊರ ಹರಿವಿನ ಪ್ರಮಾಣವು 25,000 ಕ್ಯೂಸೆಕ್ ಇದೆ. ಎರಡು ದಿನದಿಂದ ಹೊರ ಹರಿವು ತಗ್ಗಿಸಲಾಗಿತ್ತು. ಈಗ ಏರಿಸಲಾಗಿದೆ.
ಜಲಾಶಯದಲ್ಲಿ ಈಗಾಗಲೇ 18.75 ಟಿಎಂಸಿ ನೀರು ಸಂಗ್ರಹವಾಗಿರುವುದರಿಂದ ಹೊರ ಹರಿವು ಏರಿಸಲಾಗಿದೆ.ಕಬಿನಿ ಜಲಾಶಯ ಈ ಬಾರಿ ಬೇಗನೇ ತುಂಬಿದೆ. ಅಲ್ಲದೇ ಸಾಕಷ್ಟು ನೀರು ಕಪಿಲಾ ನದಿ ಮೂಲಕ ಹೊರ ಹೋಗಿದೆ. ಜಲಾಶಯ ತುಂಬಿರುವುದರಿಂದ ನೀರು ಹೊರ ಹರಿಸಲಾಗುತ್ತಿದೆ. ಕೇರಳದಲ್ಲಿ ಮಳೆ ಇರುವುದರಿಂದ ಇನ್ನೂ ಹೆಚ್ಚಿನ ನೀರು ಹರಿಯುವ ಲೆಕ್ಕಾಚಾರವಿದೆ.ನಾಲೆಗಳಿಗೂ ಬುಧವಾರದಿಂದಲೇ ನೀರು ಹರಿಸಲಾಗುತ್ತಿದೆ.