ಕಪಿಲಾ ನದಿ ಪ್ರವಾಹ: ಸೇತುವೆ, ರಸ್ತೆ‌, ಮುಳುಗಡೆ, ನಂಜನಗೂಡು ದೇಗುಲಕ್ಕೆ ಜಲದಿಗ್ಬಂಧನ

newsics.com ಮೈಸೂರು: ಕೇರಳದ ವೈನಾಡಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕಬಿನಿ ಜಲಾಶಯದಿಂದ ಹೊರಹರಿವು ಗಣನೀಯವಾಗಿ ಹೆಚ್ಚಳವಾಗಿದೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ನದಿ ಸಮೀಪದ ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಹಂಪಾಪುರ, ಹರದನಹಳ್ಳಿ ಮಧ್ಯೆ ಇರುವ ಕಪಿಲಾ ನದಿ ಸೇತುವೆ ಮುಳುಗಡೆಯಾಗಿದ್ದು, ನದಿ ಪಾತ್ರದಲ್ಲಿರುವ 124 ಗ್ರಾಮಗಳಿಗೆ ಕುಡಿಯುವ ನೀರಿನ ಪಂಪ್ ಹೌಸ್ ಕೂಡ ಮುಳುಗಡೆಯಾಗಿದೆ. ಹೀಗಾಗಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಬಿನಿ ಬಲದಂಡೆ ನಾಲೆಯೂ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಕಣೇನೂರು ಮತ್ತು ಹುಲ್ಲಹಳ್ಳಿ ಸಂಪರ್ಕ ರಸ್ತೆಯಲ್ಲಿ ನೀರು … Continue reading ಕಪಿಲಾ ನದಿ ಪ್ರವಾಹ: ಸೇತುವೆ, ರಸ್ತೆ‌, ಮುಳುಗಡೆ, ನಂಜನಗೂಡು ದೇಗುಲಕ್ಕೆ ಜಲದಿಗ್ಬಂಧನ