newsics.com
ಕೇರಳ :ಆಸ್ತಿಗಾಗಿ ಹೆತ್ತ ತಾಯಿಯನ್ನು ಕೊಲೆ ಮಾಡಿ ಆಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ಆತ್ಮಹತ್ಯೆಯ ಕತೆ ಕಟ್ಟಿದ ಮಕ್ಕಳ ಅಸಲಿ ಸಂಗತಿ ಕೇರಳದಲ್ಲಿ ಬೆಳಕಿಗೆ ಬಂದಿದೆ.
ನೇಣು ಬಿಗಿದ ಸ್ಥಿತಿಯನ್ನು ಕಾಸರಗೋಡಿನ 68 ವರ್ಷದ ಕೊಳತ್ತೂರು ಚೇಪನಡುಕದ ಪುಕ್ಲತ್ ಅಮ್ಮಾಳುವಮ್ಮ ಅವರ ಶವ ಪತ್ತೆಯಾಗಿತ್ತು. ತಮ್ಮ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಕ್ಕಳು ಗೋಳಾಡಿದ್ದರು. ಆದರೆ, ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಬಯಲಾಗಿದೆ.
ಕಾಸರಗೋಡಿನ ವೈದ್ಯಕೀಯ ಕಾಲೇಜಿನ ಫೊರೆನ್ಸಿಕ್ ಸರ್ಜನ್ ಆಗಿದ್ದ ಡಾ. ಎಸ್. ಗೋಪಾಲಕೃಷ್ಣ ಪಿಳ್ಳೆ ಅವರು ಶವಪರೀಕ್ಷೆಯಲ್ಲಿ ಆ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಪತ್ತೆಯಾಗಿದೆ ಎಂದು ವರದಿ ನೀಡಿದ್ದಾರೆ. ಈ ವರದಿಯಿಂದಾಗಿ ಆ ಮಹಿಳೆಯನ್ನು ಮಕ್ಕಳೇ ಕೊಂದಿರುವ ಸಂಗತಿ ಬೆಳಕಿಗೆ ಬಂದಿದೆ.
ಹತ್ಯೆಗೀಡಾದ ಮಹಿಳೆ ತನ್ನ ಅಜ್ಜಿಯ ಹೆಸರಿನಲ್ಲಿದ್ದ 70 ಸೆಂಟ್ಸ್ ಜಾಗವನ್ನು ಮಾರಾಟ ಮಾಡಿ ಮತ್ತೊಂದು ಜಮೀನು ಖರೀದಿಸಿದ್ದರು. ಇಲ್ಲ ಆಸ್ತಿ ವರ್ಗಯಿಸುವ ವಿಚಾರವಾಗಿ ನಡೆದ ಜಗಳ ಕೊಲೆಗೆ ಕಾರಣವಾಗಿದೆ. ಮಲಗಿದ್ದ ತಾಯಿಯನ್ನು ಕೈಗಳಿಂದ ಕತ್ತು ಹಿಸುಕಿ, ಮುಖಕ್ಕೆ ದಿಂಬು ಬಿಗಿದು ಕುತ್ತಿಗೆಗೆ ನೈಲಾನ್ ಹಗ್ಗ ಸುತ್ತಿ ಉಸಿರುಗಟ್ಟಿಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.