newsics.com/ನ್ಯೂಸಿಕ್ಸ್
ಪಿಎಸ್ಐ – ಲೇಡಿ ಕಾನ್ಸ್ಟೇಬಲ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಿಯತಮೆ ಬೇಕೆಂದು ಕುಳಿತಿದ್ದ ಪಿಎಸ್ಐ ವಿರುದ್ಧವೇ ಪ್ರಕರಣ ದಾಖಲಾಗಿದೆ. ಪಿಎಸ್ಐ ವೀರೇಶ್ ವಿರುದ್ಧ ಕಿಡ್ನಾಪ್, ಅತ್ಯಾಚಾರ ಮತ್ತು ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್ಸ್ಟೇಬಲ್ ಜಯಶ್ರೀ ಯರಗಲ್ ದೂರು ನೀಡಿದ್ದು, ಪಿಎಸ್ಐ ವಿರೇಶ್ಗೆ ಈಗ ಬಂಧನದ ಭೀತಿ ಶುರುವಾಗಿದೆ.
ಪಿಎಸ್ಐ ವೀರೇಶ್ಗೆ ಬಂಧನ ಭೀತಿ
ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯಶ್ರೀ, ಯಾದಗಿರಿಯಲ್ಲಿ ಇಂಟಲಿಜೆನ್ಸ್ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರೇಶ್ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಕೊಪ್ಪಳದಲ್ಲಿ ಅತ್ಯಾಚಾರ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ. ಅಲ್ಲದೇ ಎರಡು ಬಾರಿ ಬಲವಂತವಾಗಿ ಗರ್ಭಪಾತ ಮತ್ತು ಅಪಹರಣ ಹಿನ್ನೆಲೆ ಕಿಡ್ನಾಪ್ ಪ್ರಕರಣ ದಾಖಲಾಗಿದೆ. ಬಲತ್ಕಾರ, ಅಪಹರಣ ಮತ್ತು ಜಾತಿನಿಂದನೆ SC/ST ಅಟ್ರಾಸಿಟಿ ಕಾಯ್ದೆಯಡಿ ಪಿಎಸ್ಐ ವೀರೇಶ್ ವಿರುದ್ಧ ಕೇಸ್ ದಾಖಲಾಗಿದ್ದು, ಈ ಹಿನ್ನೆಲೆ ಪಿಎಸ್ಐ ವೀರೇಶ್ಗೆ ಬಂಧನ ಭೀತಿ ಎದುರಾಗಿದೆ.
ಈ ಮೊದಲು ಪಿಎಸ್ಐ ವೀರೇಶ್ ಲೇಡಿ ಕಾನ್ಸ್ಟೇಬಲ್ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದರು. ಎಂಟು ವರ್ಷಗಳ ಕಾಲ ಜೊತೆಗಿದ್ದು, ಇದೀಗ ಬೇರೊಬ್ಬನೊಂದಿಗೆ ಮದುವೆ ಆಗಲು ರೆಡಿಯಾಗಿದ್ದಾರೆ. 35 ಲಕ್ಷ ರೂಪಾಯಿ ಪಡೆದು ಬೇರೊಬ್ಬನ ಜೊತೆ ಮದುವೆಯಾಗುತ್ತಿದ್ದಾರೆ ಎಂದು ಪಿಎಸ್ಐ ವೀರೇಶ್ ಆರೋಪಿಸಿದ್ದರು.
ಪಿಎಸ್ಐ – ಲೇಡಿ ಕಾನ್ಸ್ಟೇಬಲ್ ಲವ್ ಸ್ಟೋರಿ
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುಬ್ಬೆವಾಡದ ಪಿಎಸ್ಐ ವೀರೇಶ್ ಆಲೂರು, ವಿಜಯಪುರ ಜಿಲ್ಲೆಯ ಆಲ್ಮೇಲ್ ತಾಲ್ಲೂಕಿನ ಬಳಗಾನೂರಿನ ಜಯಶ್ರೀ ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಿಂದಗಿಯ ಶ್ರೀ ಮಾತಾ ಕೋಚಿಂಗ್ ಸೆಂಟರ್ನಲ್ಲಿ ಇಬ್ಬರ ಪ್ರೇಮಾಂಕುರವಾಗಿತ್ತು. 2017ರಲ್ಲಿ ವೀರೇಶ್ ಪಿಎಸ್ಐ ಆಗಿ ಸೆಲೆಕ್ಟ್ ಆಗಿದ್ದರು. ಕೋಚಿಂಗ್ ಸೆಂಟರ್ನಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಇಬ್ಬರ ಮಧ್ಯೆ ಪ್ರೀತಿ ಅರಳಿತ್ತು. ಇದಾದ ಮೇಲೆ ಇಬ್ಬರ ನಡುವೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದರು. ಗಂಡ ಹೆಂಡತಿಯಂತೆ ಒಂದೇ ರೂಮಿನಲ್ಲಿ ಸಂಸಾರ ಮಾಡುತ್ತಿದ್ದರು ಎನ್ನಲಾಗಿದೆ.
ರಾಯಚೂರಿನ ಬಾಲಮರೆಮ್ಮ ದೇವಸ್ಥಾನದಲ್ಲಿ ಇಬ್ಬರು ಕೂಡ ಹಾರ ಬದಲಿಸಿಕೊಂಡಿದ್ದರು. ಲೇಡಿ ಕಾನ್ಸ್ಟೇಬಲ್ ಜಯಶ್ರೀ ಆರೋಗ್ಯ ಸಮಸ್ಯೆ ಮುಂದಿಟ್ಟು ಮೂರು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎಂದು ಪಿಎಸ್ಐ ಆರೋಪಿಸಿದ್ದಾರೆ. ಮೊದಲಿಗೆ ಎಸ್ಡಿಎ ಹುದ್ದೆಗೆ ಆಯ್ಕೆಯಾಗಿದ್ದ ಜಯಶ್ರೀ ಕೊಪ್ಪಳದಲ್ಲಿ ಡ್ಯೂಟಿ ಮಾಡುತ್ತಿದ್ದರು. ಇತ್ತ ಪ್ರೊಬೇಷನರಿ ಪಿಎಸ್ಐ ಆಗಿ ವೀರೇಶ್ ಹೊಸಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊಪ್ಪಳದಲ್ಲಿ ಇಬ್ಬರೂ ಒಂದೇ ರೂಮಿನಲ್ಲಿ 3 ವರ್ಷ ವಾಸ ಮಾಡಿದ್ದೇವೆ ಎಂದು ಪಿಎಸ್ಐ ವೀರೇಶ್ ಹೇಳಿಕೊಂಡಿದ್ದರು.
ಮದುವೆಗೆ ಒಪ್ಪಿ ಬಳಿಕ ಕೈಕೊಟ್ಟ ಲೇಡಿ ಪೇದೆ
ಬಳಿಕ ಎಸ್ಡಿಎ ಹುದ್ದೆ ಬಿಟ್ಟು ಕಾನ್ಸ್ಟೇಬಲ್ ಆಗಿದ್ದ ಜಯಶ್ರೀ, ರಾಯಚೂರು ಗ್ರಾಮೀಣ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತ ವೀರೇಶ್ ಕೂಡ ರಾಯಚೂರಿನಲ್ಲಿ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ರಾಯಚೂರಿನಿಂದ ಬೆಂಗಳೂರಿಗೆ ವೀರೇಶ್ಗೆ ವರ್ಗಾವಣೆ ಆಗಿತ್ತು. ಸುಮಾರು 2 ವರ್ಷಗಳ ಕಾಲ ವೀರೇಶ್ ರಾಯಚೂರಿಗೆ ಬಂದು ಹೋಗುತ್ತಿದ್ದರು. ಆದ್ರೆ, ಈ ಮೊದಲು ಮದುವೆಗೆ ಒಪ್ಪಿದ್ದ ಲೇಡಿ ಪೊಲೀಸ್ ಬಳಿಕ ಕೈಕೊಟ್ಟಿದ್ದರು. ಈ ವಿಚಾರವಾಗಿ ರಾಯಚೂರು ಎಸ್ಪಿ, ಮತ್ತು ಡಿವೈಎಸ್ಪಿ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆದಿತ್ತು. ಆದರೂ ಲೇಡಿ ಪೊಲೀಸ್ ಮದುವೆಗೆ ಒಪ್ಪಿರಲಿಲ್ಲ.
ಮದುವೆಗೆ ಒಪ್ಪದ ಪ್ರಿಯತಮೆಯೇ ಬೇಕೆಂದು ಕುಳಿತ ಪಿಎಸ್ಐ
ಸುಮಾರು 8 ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಪಿಎಸ್ಐ ವೀರೇಶ್ ಜಯಶ್ರೀ ಕುಟುಂಬಕ್ಕೆ ಬರೋಬ್ಬರಿ 35 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಣ ಮಾತ್ರ ಅಲ್ಲದೇ ಊರಲ್ಲಿ ಜಯಶ್ರೀಗೆ ಮನೆ ಕಟ್ಟಿಸಿಕೊಟ್ಟಿದ್ದಾರಂತೆ, ಆಕೆಯ ತಮ್ಮನಿಗೂ ಟ್ರಾಕ್ಟರ್ ಕೊಡಿಸಿದ್ದೇನೆ ಎಂದು ಹೇಳಿಕೊಂಡಿರುವ ಪಿಎಸ್ಐ ನನ್ನನ್ನೇ ಮದುವೆ ಆಗುವಂತೆ ಪಟ್ಟು ಹಿಡಿದಿದ್ದರು. ಇದೀಗ ಉಲ್ಟಾ ಹೊಡೆದಿರುವ ಲೇಡಿ ಕಾನ್ಸ್ಟೇಬಲ್ ಜಯಶ್ರೀ ಪಿಎಸ್ಐ ವಿರುದ್ಧ ದೂರು ನೀಡಿದ್ದಾರೆ.
ಮದುವೆಗೆ ತೆರಳುತ್ತಿದ್ದಾಗ ಬಿರುಗಾಳಿಗೆ ಸಿಲುಕಿದ ಏಕನಾಥ್ ಶಿಂಧೆ ಅವರ ಹೆಲಿಕಾಪ್ಟರ್