newsics.com
ರಾಜಸ್ಥಾನ ರಾಜಧಾನಿ ಜೈಪುರದಲ್ಲಿರುವ ವಿಧಾನಸಭೆ ಸಚಿವಾಲಯಕ್ಕೆ ಬಂದ ಬಾಂಬ್ ಬೆದರಿಕೆ ನಗರದಲ್ಲಿ ದೊಡ್ಡ ಆತಂಕಕ್ಕೆ ಕಾರಣವಾಗಿದೆ.
https://youtube.com/shorts/yrC3ODyMmjo?si=ybubL3Ee_pXg1sLS
ವರದಿಗಳ ಪ್ರಕಾರ, ಸಚಿವಾಲಯಕ್ಕೆ ಬಾಂಬ್ ಸ್ಫೋಟದ ಬಗ್ಗೆ ಅನುಮಾನಾಸ್ಪದ ಸಂದೇಶವೊಂದು ಬಂದಿದೆ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಅಧಿಕಾರಿಗಳು ನಿರಂತರ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಮೊದಲಿಗೆ ಬಾಂಬ್ ಸ್ಫೋಟದ ಬಗ್ಗೆ ಅನುಮಾನಾಸ್ಪದ ಸಂದೇಶವೊಂದು ಬಂದಿದ್ದು, ಈ ಸಂದೇಶ ಬಂದ ತಕ್ಷಣ ಅಧಿಕಾರಿಗಳು ಎಚ್ಚರಗೊಂಡು, ಭದ್ರತಾ ಸಂಸ್ಥೆಗಳಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ವಿಧಾನಸಭೆ ಸಚಿವಾಲಯ ಸಂಕೀರ್ಣದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ನೌಕರರನ್ನು ತಕ್ಷಣ ಹೊರಗೆ ಕಳಿಸಿ, ಆವರಣವನ್ನು ಖಾಲಿ ಮಾಡಲಾಗಿದೆ. ಸುತ್ತಮುತ್ತಲ ಪ್ರದೇಶವನ್ನೂ ಕೂಡ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಮಾಹಿತಿ ಸಿಕ್ಕ ಕೂಡಲೇ ಭಯೋತ್ಪಾದನಾ ನಿಗ್ರಹ ದಳ (ATS), ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಸ್ಥಳಕ್ಕೆ ಧಾವಿಸಿದೆ. ಇವುಗಳು ಇಡೀ ವಿಧಾನಸಭಾ ಸಂಕೀರ್ಣವನ್ನು ಸುತ್ತುವರಿದು, ಸಂಪೂರ್ಣ ಶೋಧ ಕಾರ್ಯಾಚರಣೆ ಆರಂಭಿಸಿವೆ.