https://youtube.com/shorts/2gi1iB6d4H0?si=CNONE5w7sxEdw2CR
newsics.com
ಬೆಂಗಳೂರು : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಭಾರೀ ಚರ್ಚೆ ನಡೆದಿದೆ. ಈ ಸಂಬಂಧ ಸಿಬಿಐ ಅಧಿಕಾರಿಗಳ ತನಿಖೆ ವೇಳೆ ಹಲವು ಪ್ರಮುಖ ವಿಷಯಗಳು ಬೆಳಕಿಗೆ ಬಂದಿದ್ದು, ಕೋರ್ಟ್ ತೀರ್ಪಿನಲ್ಲಿ ಕೆಲವು ಸ್ಪೋಟಕ ವಿಚಾರಗಳು ಕೂಡ ಬಯಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ದೇಶದಲ್ಲೇ ಅತ್ಯಂತ ಸಮರ್ಥ ಮತ್ತು ದಕ್ಷ ಇಲಾಖೆ ಎಂದು ಗುರುತಿಸಲ್ಪಟ್ಟಿದೆ. ಆದ್ರೆ ಕೆಲವು ಅಧಿಕಾರಿಗಳ ಕೃತ್ಯಗಳಿಂದ ಸಂಕಷ್ಟಕ್ಕೆ ಗುರಿಯಾಗ್ತಿರೋದು ಬೇಸರದ ಸಂಗತಿಯಾಗಿದೆ. ಯೋಗೀಶ್ ಗೌಡ ಕೇಸ್ನಲ್ಲೇ ಪೊಲೀಸರು ಸುಳ್ಳು ಸಾಕ್ಷ್ಯ ನೀಡಿದ್ದಷ್ಟೇ ಅಲ್ಲದೇ ಪ್ರಕರಣದ ದಾರಿ ತಪ್ಪಿಸೋ ಕೆಲಸ ಮಾಡಿದ್ದಾರೆ ಖಾಕಿ ತೊಟ್ಟ ಅಧಿಕಾರಿಗಳು.
ಪ್ರಾಸಿಕ್ಯೂಷನ್ ಸಾಕ್ಷಿಗಳಾದ (ಪಿಡಬ್ಲ್ಯೂ) ಡಾ. ದತ್ತಾತ್ರೇಯ ಗುಡಗಂಟಿ, ಆನಂದ್ ಈರಪ್ಪ ಉದ್ದಣ್ಣನವರ್, ವಿನಾಯಕ ಬಿಂಜಿಯವರ್, ಮೋಹನ್ ಯೆಚರಪ್ಪ ಮುಲ್ಮುತ್ತಲ್, ವಿವೇಕಾನಂದ ದಳವಾಯಿ ಅವರು ಅಪರಾಧ ದಂಡ ಸಂಹಿತೆಯ ಸೆಕ್ಷನ್ 164 ರ ಅಡಿಯಲ್ಲಿ ತಮ್ಮ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಿದ್ದರು.
ಕೊಲೆ ಘಟನೆಯ ಬಗ್ಗೆ ವಿವರಿಸಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಅವರು ಪ್ರತಿಕೂಲ ಪ್ರತಿಕ್ರಿಯೆ ತೋರಿ, ತಮ್ಮ ಅಗತ್ಯಗಳಿಗೆ ತಕ್ಕಂತೆ ಸಾಕ್ಷ್ಯಗಳನ್ನು ನೀಡುವಂತೆ ಸಿಬಿಐ ತಮ್ಮ ಮೇಲೆ ಒತ್ತಡ ಹೇರಿದೆ ಎಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ.
ಪೊಲೀಸ್ ಇಲಾಖೆಯಡಿಯಲ್ಲಿ ಪ್ರಮುಖ ಹುದ್ದೆಯನ್ನು ಹೊಂದಿದ್ದ ಮತ್ತು ಧಾರವಾಡ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಶಿವಾನಂದ ಚಲವಾದಿ ಎಂಬ ಮತ್ತೊಬ್ಬ ಪಿಡಬ್ಲ್ಯೂ ಅವರ ಸಾಕ್ಷ್ಯದಲ್ಲಿ ಹೋಲಿಕೆಯನ್ನು ಕಾಣಬಹುದು. ಅವರು ತಮ್ಮ ಸಾಕ್ಷ್ಯದಲ್ಲಿ, ಸಿಬಿಐಗೆ ಹೆದರುತ್ತಿದ್ದರು ಮತ್ತು ಆದ್ದರಿಂದ ಅವರು ಮ್ಯಾಜಿಸ್ಟ್ರೇಟ್ ಮುಂದೆ ಸುಳ್ಳು ಹೇಳಿದ್ದಾರೆ.
ಈ ನ್ಯಾಯಾಲಯದ ಮುಂದೆ ಅಥವಾ ಮ್ಯಾಜಿಸ್ಟ್ರೇಟ್ ಮುಂದೆ ಸುಳ್ಳು ಸಾಕ್ಷ್ಯವನ್ನು ಸಲ್ಲಿಸಿದೆ. ಅವರ ಕೃತ್ಯವು ಸಾರ್ವಜನಿಕರು ನ್ಯಾಯಾಂಗ ವ್ಯವಸ್ಥೆಯಲ್ಲಿ ಇಟ್ಟಿರುವ ಇಮೇಜ್ ಮತ್ತು ನಂಬಿಕೆಯನ್ನು ಹಾಳುಮಾಡುವ ಪ್ರಯತ್ನವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಸಾಕಷ್ಟು ಸಮಯ ಕಳೆದಿದ್ದರೂ, ಯಾವುದೇ ಪೊಲೀಸ್ ಅಧಿಕಾರಿಗಳು ತಮ್ಮ ಉನ್ನತ ಅಧಿಕಾರಿಗಳಿಗೆ ಅಥವಾ ಕನಿಷ್ಠ ನ್ಯಾಯಾಲಯಕ್ಕೆ ಸಿಬಿಐ ನೀಡಿರುವ ಬೆದರಿಕೆಯ ಬಗ್ಗೆ ದೂರು ನೀಡುವುದು ಸೂಕ್ತವೆಂದು ಭಾವಿಸಿರಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.