Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ತನ್ನ ಹಸುವನ್ನೇ ಮಾರಿ ಭ್ರಷ್ಟರ ನಿದ್ರೆ ಗೆಡಿಸಿದ ರೈತ; ಏನಿದು ಭ್ರಷ್ಟಾಚಾರದ ಕಥೆ?
ಕರ್ನಾಟಕಪ್ರಮುಖ

ತನ್ನ ಹಸುವನ್ನೇ ಮಾರಿ ಭ್ರಷ್ಟರ ನಿದ್ರೆ ಗೆಡಿಸಿದ ರೈತ; ಏನಿದು ಭ್ರಷ್ಟಾಚಾರದ ಕಥೆ?

Share
2 Min Read
SHARE

™ಭ್ರಷ್ಟಾಚಾರಕ್ಕೆ ಅಂತ್ಯ ಹಾಡಲು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಒಬ್ಬ ರೈತ ಧೈರ್ಯದ ನಿರ್ಧಾರ ತೆಗೆದುಕೊಂಡಿದ್ದಾರೆ. ರವಿ ಎಂಬ ರೈತ, ಇಂದು ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿದ್ದಾರೆ.

ಅರಕಲಗೂಡು ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಅತ್ತಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದ ಅಭಿವೃದ್ಧಿ ಕೆಲಸಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ರವಿ ಸಂಶಯ ಪಟ್ಟಿದ್ದರು.

ಹೌದು, ಈ ವೇಳೆ ರವಿ ಮಾಹಿತಿ ಕೇಳಿದಾಗ ಪಂಚಾಯಿತಿಯಿಂದ ಬಂದ ಉತ್ತರ ದಿಗಿಲು ಹುಟ್ಟಿಸುವಂತಿತ್ತು. “ನೀವು ಕೇಳಿದ ಮಾಹಿತಿ ಸುಮಾರು 16,000 ಪುಟಗಳಷ್ಟಿದೆ, ಅದಕ್ಕೆ ಜೆರಾಕ್ಸ್ ಮತ್ತು ಇತರ ಶುಲ್ಕ ಸೇರಿ ನೀವು 32,000 ರೂಪಾಯಿ ಪಾವತಿಸಬೇಕು” ಎಂದು ಅಧಿಕಾರಿಗಳು ತಿಳಿಸಿದರು.

ಬಹುಶಃ ಅಧಿಕಾರಿಗಳು, “ಒಬ್ಬ ಸಾಮಾನ್ಯ ರೈತನಿಗೆ 32 ಸಾವಿರ ಎಲ್ಲಿಂದ ಬರುತ್ತದೆ? ಹಣವಿಲ್ಲ ಎಂದು ಸುಮ್ಮನೆ ಕೂರುತ್ತಾನೆ” ಎಂದು ಭಾವಿಸಿದ್ದರು. ಆದರೆ ರವಿ ಅಂತಹವರಲ್ಲ. ಅವರು ತಮ್ಮ ಮನೆಯಲ್ಲಿದ್ದ, ತಮ್ಮ ಜೀವನಕ್ಕೆ ಆಧಾರವಾಗಿದ್ದ ಹಸುವನ್ನೇ ಮಾರಾಟ ಮಾಡಿದರು! ಹಸು ಮಾರಿ ಬಂದ ಹಣವನ್ನು ಪಂಚಾಯಿತಿಗೆ ಪಾವತಿಸಿ, ಆ 16,000 ಪುಟಗಳ ದಾಖಲೆಯನ್ನು ಮನೆಗೆ ಹೊತ್ತೊಯ್ದಿದ್ದಾರೆ.

16,000 ಪುಟಗಳ ರಹಸ್ಯವೇನು?

ಈಗ ರವಿ ಬಳಿ 16,000 ಪುಟಗಳ ದೊಡ್ಡ ರಾಶಿಯೇ ಇದೆ. ಅವರು ದಿನವಿಡೀ ಕುಳಿತು ಒಂದೊಂದೇ ಪುಟವನ್ನು ಓದುತ್ತಿದ್ದಾರೆ. ಮಣ್ಣು ಹಾಕದೆಯೇ ಬಿಲ್ ಎಲ್ಲಿ ಪಾವತಿಸಲಾಗಿದೆ? ಹಳೆಯ ರಸ್ತೆಗೆ ಹೊಸ ಬಣ್ಣ ಬಳಿದು ಹಣ ಎಲ್ಲಿ ಲೂಟಿ ಮಾಡಲಾಗಿದೆ? ಇವೆಲ್ಲವನ್ನೂ ಪತ್ತೆಹಚ್ಚಿ ಲೋಕಾಯುಕ್ತಕ್ಕೆ ದೂರು ನೀಡಲು ಅವರು ಸಿದ್ಧತೆ ನಡೆಸುತ್ತಿದ್ದಾರೆ.

ಅವರು ಇದನ್ನು ತಮ್ಮ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಪಂಚಾಯಿತಿಗೆ ಬಂದ ಹಣವು ಹಳ್ಳಿಯ ಅಭಿವೃದ್ಧಿಗೆ ಬಳಕೆಯಾಗಬೇಕು ಎನ್ನುವುದು ಅವರ ಉದ್ದೇಶ. ರವಿಯಂತಹ ಒಬ್ಬ ರೈತ ಸಿಕ್ಕರೂ ಸಾಕು, ಎಷ್ಟೋ ಭ್ರಷ್ಟ ಅಧಿಕಾರಿಗಳ ಬಣ್ಣ ಬಯಲಾಗುತ್ತದೆ. ದೇಶದಲ್ಲಿ ಭ್ರಷ್ಟಾಚಾರ ಇಂದು ಕ್ಯಾನ್ಸರ್‌ನಂತೆ ಹರಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಇಂತಹ ಲೂಟಿ ನಡೆಯುತ್ತಿದ್ದರೆ, ಹಳ್ಳಿಯನ್ನು ಉಳಿಸುವುದು ಹೇಗೆ? ಯಾರೂ ಪ್ರಶ್ನಿಸುವುದಿಲ್ಲ ಎಂದು ತಿಳಿಯಬೇಡಿ, ಕನಿಷ್ಠ ಒಬ್ಬ ರೈತನಾದರೂ ಪ್ರಶ್ನಿಸಬಲ್ಲ ಎಂಬುದನ್ನು ರವಿ ಸಾಬೀತುಪಡಿಸಿದ್ದಾರೆ.

₹32,000 ಶುಲ್ಕ ಕೇಳಿದ್ದು ಅಧಿಕಾರಿಗಳ ಕುತಂತ್ರವಿರಬಹುದು. ರೈತನನ್ನು ಹಾದಿ ತಪ್ಪಿಸುವ ಸ್ಕೆಚ್ ಇರಬಹುದು. ಆದರೆ ರವಿ ತನ್ನ ಹಸುವನ್ನೇ ತ್ಯಾಗ ಮಾಡಿ ಭ್ರಷ್ಟರಿಗೆ ಪಾಠ ಕಲಿಸಲು ಮುಂದಾಗಿದ್ದಾರೆ. ಅವರ ಈ ಹೋರಾಟಕ್ಕೆ ನಾವು ಬೆಂಬಲ ನೀಡಬೇಕು.

https://www.newsics.com/2026/04/17/16-people

TAGGED:The farmer who sold his cow and disturbed the sleep of the corrupt; what is this story of corruption?
Share This Article
Facebook Twitter Copy Link Print
Previous Article ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ
Next Article ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಓಯೋಗೆ ಹೋದ ವಿದ್ಯಾರ್ಥಿನಿ! ಮುಂದೇನಾಯ್ತು?

Popular Posts

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

You Might Also Like

ಕರ್ನಾಟಕಪ್ರಮುಖ

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read
ಪ್ರಮುಖಕರ್ನಾಟಕ

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read
ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read
ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?