ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಒಬ್ಬ ಯುವಕ ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ನಿಂದಿಸಿ ಪೋಸ್ಟ್ ಮಾಡಿರುವ ಆರೋಪ ಕೇಳಿಬಂದಿದೆ.
ಯುವಕನೊರ್ವ ಇನ್ಸ್ಟಾಗ್ರಾಮ್ನಲ್ಲಿ ‘Prajwal_kannadiga_29’ ಎಂಬ ಪೇಜ್ ಹೊಂದಿದ್ದಾನೆ. ಇಲ್ಲಿ ಆತ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಾನೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯರನ್ನು ಗುರಿಯಾಗಿಟ್ಟುಕೊಂಡು ರೀಲ್ಸ್ ಮಾಡಿದ್ದಾನೆ. ಆ ರೀಲ್ಸ್ನಲ್ಲಿ ಅವನು ನೇರವಾಗಿ ಏಕವಚನದಲ್ಲಿ ಮಾತನಾಡಿದ್ದಾನೆ. ಸಾಮಾನ್ಯ ಟೀಕೆ ಅಲ್ಲ, ಅಸಭ್ಯ ಪದಗಳನ್ನು ಬಳಸಿ ನಿಂದಿಸಿದ್ದಾನೆ. ಕೇವಲ ರಾಜಕೀಯ ವಿಚಾರಗಳನ್ನು ಮಾತ್ರವಲ್ಲ, ಸಿಎಂ ಅವರ ವೈಯಕ್ತಿಕ ವಿಚಾರಗಳನ್ನು ಎಳೆದು ಟೀಕೆ ಮಾಡಿದ್ದಾನೆ. ಇದು ತುಂಬಾ ಅನಾವಶ್ಯಕ ಮತ್ತು ಅಸಭ್ಯವಾದ ನಡವಳಿಕೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ರೀಲ್ಸ್ ಮಾಡುವಾಗ ಆತ ಕೆಲವು ವೈಯಕ್ತಿಕ ವಿಷಯಗಳನ್ನು ಹೇಳುತ್ತಾ ಸಿಎಂ ಸಿದ್ದರಾಮಯ್ಯರನ್ನು ಅವಮಾನಿಸುವಂತೆ ಮಾತನಾಡಿದ್ದಾನೆ. ಸಾಮಾನ್ಯ ಜನರಿಗೆ ಇದು ತುಂಬಾ ಕೆಟ್ಟದಾಗಿ ಕಾಣಿಸಿದೆ. ಯಾವುದೇ ನಾಯಕರನ್ನು ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಅದು ಅಸಭ್ಯ ಪದಗಳು, ಅಶ್ಲೀಲ ಭಾಷೆ ಮತ್ತು ವೈಯಕ್ತಿಕ ದಾಳಿಯಾಗಬಾರದು. ಈ ಯುವಕನ ರೀಲ್ಸ್ ಅದನ್ನು ಮೀರಿ ಹೋಗಿದೆ. ಕಾಮೆಂಟ್ಗಳಲ್ಲೂ ಅವನು ಅಶ್ಲೀಲ ಪದಗಳನ್ನು ಬಳಸಿ ಇನ್ನಷ್ಟು ಕೆಟ್ಟದಾಗಿ ಬರೆದಿದ್ದಾನೆ. ಇದು ಸೋಶಿಯಲ್ ಮೀಡಿಯಾ ನಿಯಮಗಳನ್ನು ಉಲ್ಲಂಘಿಸುವಂತಹದ್ದು ಎನ್ನಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ
ಈ ರೀಲ್ಸ್ಗಳು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ಎದ್ದಿದೆ.