newsics.com
ಶುಭೋದಯ
ನಿತ್ಯ ಪಂಚಾಂಗ
16 ಆಗಸ್ಟ್ 2024, ಶುಕ್ರವಾರ
ದಿನ ವಿಶೇಷ:
* ವರಮಹಾಲಕ್ಷ್ಮೀ ವ್ರತ
* ಶ್ರಾವಣ ಪುತ್ರದಾ ಏಕಾದಶಿ
* ಸಿಂಹ ಸಂಕ್ರಮಣ
* ಜರಾ- ಜೀವಂತಿಕಾ ಪೂಜೆ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 16/08/2024
ತಿಂಗಳು – ಆಗಸ್ಟ್
ಬಣ್ಣ – ಬಿಳಿ
ವಾರ – ಶುಕ್ರವಾರ
ತಿಥಿ – ಏಕಾದಶಿ 09:39:09
ಪಕ್ಷ – ಶುಕ್ಲ
ನಕ್ಷತ್ರ – ಮೂಲ 12:42:46
ಯೋಗ – ವಿಷ್ಕುಂಭ 13:10:23
ಕರಣ – ವಿಷ್ಟಿ (ಭದ್ರ) 09:39:10
ಕರಣ – ಭವ 20:57:42
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಧನು
ಸೂರ್ಯ ರಾಶಿ ಕರ್ಕಾಟಕ till 19:42:39
ಸೂರ್ಯ ರಾಶಿ ಸಿಂಹ from 19:42:39
ಋತು- ವರ್ಷ
ಸೂರ್ಯೋದಯ 06:08:39
ಸೂರ್ಯಾಸ್ತ 18:38:48
ಹಗಲಿನ ಅವಧಿ 12:30:08
ರಾತ್ರಿಯ ಅವಧಿ 11:29:57
ಚಂದ್ರೋದಯ 15:48:58
ಚಂದ್ರಾಸ್ತ 27:20:46*
ರಾಹು ಕಾಲ 10:50 – 12:24 ಅಶುಭ
ಯಮಘಂಡ ಕಾಲ 15:31 – 17:05 ಅಶುಭ
ಗುಳಿಕ ಕಾಲ 07:42 – 09:16
ಅಭಿಜಿತ್ 11:59 – 12:49 ಶುಭ
ದುರ್ಮುಹೂರ್ತ 08:39 – 09:29 ಅಶುಭ
ದುರ್ಮುಹೂರ್ತ 12:49 – 13:39 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಮನುಷ್ಯನಿಗೆ ಅಹಂ ಬರಲು ಕಾರಣೀಭೂತವಾದ ವಿಷಯಗಳೆಂದರೆ ರೂಪ, ಯೌವನ, ಅಧಿಕಾರ, ಸಂಪತ್ತು ಹಾಗೂ ಖ್ಯಾತಿ. ಇವೆಲ್ಲವೂ ಶಾಶ್ವತವಲ್ಲ ಎಂಬ ಕಟುಸತ್ಯದ ಅರಿವಿದ್ದವರು ಮಾತ್ರ ವಿನಯವಂತರು ಆಗಿರುತ್ತಾರೆ.
– ಆಚಾರ್ಯ ಚಾಣಕ್ಯ
***
ಈ ದಿನದ ಸುಭಾಷಿತ
ಸಭಾ ಯತ್ರ ಸಭ್ಯೋಽಸ್ತಿ
ಸ ಸಭ್ಯೋ ಧರ್ಮಮಾಹ ಯಃ |
ಸ ಧರ್ಮೋ ಯತ್ರ ಸತ್ಯಂ ಸ್ಯಾತ್
ತತ್ಸತ್ಯಂ ಯತ್ರ ನ ಚ್ಛಲಮ್ ||
(ಕಥಾಸರಿತ್ಸಾಗರ)
ಸಭ್ಯನಿದ್ದರೆ ಮಾತ್ರ ಸಭೆಯೆನಿಸುವುದು. ಧರ್ಮವನ್ನು ಹೇಳುವಾತನೇ ಸಭ್ಯನು. ಸತ್ಯವೆಲ್ಲಿದೆಯೋ ಅದೇ ಧರ್ಮ. ಮೋಸವೆಲ್ಲಿಲ್ಲವೋ ಅದುವೇ ಸತ್ಯ.
***
ಈ ದಿನದ ಇತಿಹಾಸ
* ಶ್ರೀ ರಾಮಕೃಷ್ಣ ಪರಮಹಂಸರು ಆಗಸ್ಟ್ 16, 1886 ರಂದು ತಮ್ಮ 50ನೇ ವಯಸ್ಸಿನಲ್ಲಿ ನಿಧನರಾದರು. ಶ್ರೀ ರಾಮಕೃಷ್ಣ ಪರಮಹಂಸ ಭಾರತದ ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು. 19ನೇ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು. ಇವರ ಮೊದಲ ಹೆಸರು “ಗಧಾದರ”. “ನಮನ” . ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಇವರ ಗೌರವಾರ್ಥವಾಗಿಯೇ ಇರುವುದು.
* ಆಗಸ್ಟ್ 16, 1908 ರಂದು ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ 3000 ಮಂದಿ ಭಾರತೀಯರು ಜೊಹಾನ್ಸ್ ಬರ್ಗ್ ನ ಹಮೀದಾ ಮಸೀದಿಯ್ಲಲಿ ‘ನೋಂದಣಿ ಸರ್ಟಿಫಿಕೇಟು’ಗಳನ್ನು ಸುಟ್ಟು ಹಾಕಿದರು. (ಎಂಟು ವರ್ಷ ಮೇಲ್ಪಟ್ಟ ಪ್ರತಿ ಪುರುಷ, ಮಹಿಳೆ, ಮಗು ಈ ಸರ್ಟಿಫಿಕೇಟ್ ಹೊಂದಿರಬೇಕಾದುದು ಕಡ್ಡಾಯವಾಗಿತ್ತು). ಹೊಸ ವಲಸೆ ಕಾಯ್ದೆಯನ್ನು ಆಗಸ್ಟ್ 16ರ ಒಳಗಾಗಿ ತಿದ್ದುಪಡಿ ಮಾಡದೇ ಇದ್ದರೆ ಭಾರತೀಯರು ಸ್ವಯಂ ಇಚ್ಛೆಯಿಂದ ಪಡೆದ ಈ ಸರ್ಟಿಫಿಕೇಟುಗಳನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿ ಪರಿಣಾಮ ಎದುರಿಸುವರು ಎಂದು ಘೋಷಿಸಿ ಗಾಂಧೀಜಿ ಅವರು ಜನರಲ್ ಜಾನ್. ಸಿ. ಸ್ಮಟ್ಸ್ ಅವರಿಗೆ ಸಂದೇಶ ಕಳುಹಿಸಿದ ಬಳಿಕ ಈ ಘಟನೆ ನಡೆಯಿತು.
* ಆಗಸ್ಟ್ 16, 1936 ರಂದು ಬರ್ಲಿನ್ನಿನಲ್ಲಿ 11ನೇ ಒಲಿಂಪಿಕ್ಸ್ ಕ್ರೀಡಾಕೂಟ ಮುಕ್ತಾಯಗೊಂಡಿತು.
* ಮಾಜಿ ಭಾರತೀಯ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಸ್ಟ್ 16, 2018 ರಂದು ನಿಧನರಾದರು.