https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಪರಿಣಾಮ ಭಾರತದ ಹೋಟೆಲ್ ಉದ್ಯಮ ಮತ್ತು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರಲಾರಂಭಿಸಿದೆ.
ಜಾಗತಿಕ ಇಂಧನ ಪೂರೈಕೆ ಉಂಟಾಗಿರುವ ವ್ಯತ್ಯಯದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಎಲ್ಪಿಜಿ ಕೊರತೆ ಎದುರಾಗಿದ್ದು, ಸಿಲಿಂಡರ್ಗಳ ಬೆಲೆ ಗಗನಕ್ಕೇರಿದೆ. ಜೊತೆಗೆ ಗ್ಯಾಸ್ ಖಾಲಿಯಾದ್ರೆ ಹೇಗಪ್ಪಾ ಅಂತಾ ಯೋಚ್ನೆ ಮಾಡ್ತಿದ್ದಾರೆ. ಆದ್ರೆ ಕೆಲವು ಮನೆಗಳಿಗೆ, ಹೋಟೆಲ್ ಗಳಿಗೆ ಈ ಬಿಸಿ ಜೋರಾಗಿ ತಟ್ಟಿಲ್ಲ. ಅದ್ರಲ್ಲೂ ಕೇರಳದ ಈ ಒಂದು ಸಣ್ಣ ಮನೆಗೆ ಎಲ್ಪಿಜಿ ಖಾಲಿಯಾಗ್ತಿರೋ ಬಗ್ಗೆ ಕಿಂಚಿತ್ತು ಆತಂಕ ಇಲ್ಲ ನೋಡಿ.
ಕೇರಳದ ಆಲಪ್ಪುಳ ಜಿಲ್ಲೆಯ ಅರಟ್ಟುವಾಝಿಯ ರೆತ್ನಮ್ಮ ಕುಟುಂಬ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ತಮ್ಮ ಅಡುಗೆಗಾಗಿ ಗ್ಯಾಸ್ ಸಿಲಿಂಡರ್ಗಳ ಮೇಲೆ ಅವಲಂಬಿಸದೇ, ಸ್ವಂತ ಬೋರ್ವೆಲ್ನಿಂದ ಹೊರಬರುವ ನೈಸರ್ಗಿಕ ಅನಿಲವನ್ನು ಬಳಸುತ್ತಿದೆ.
ಈ ಕುಟುಂಬ 2011ರಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಬೋರ್ವೆಲ್ ತೋಡಿಸಿತ್ತು. ಆದರೆ 75 ಅಡಿ ತೋಡಿದರೂ ಶುದ್ಧ ನೀರು ಸಿಗದೆ, ಕೆಸರು ನೀರು ಮಾತ್ರವೇ ಬರುತ್ತಿತ್ತು. ಇದರಿಂದ ಬಾವಿಯನ್ನು ಮುಚ್ಚುವ ನಿರ್ಧಾರ ಕೈಗೊಳ್ಳಲಾಯಿತು.
ಆದರೆ ಇದೇ ವೇಳೆ ನಡೆದ ಒಂದು ಘಟನೆ ಎಲ್ಲವನ್ನೂ ಬದಲಿಸಿತು. ಪೈಪ್ ಮುಚ್ಚುವ ಸಮಯದಲ್ಲಿ ಯಾರೋ ಬೆಂಕಿಕಡ್ಡಿ ಹಚ್ಚುತ್ತಿದ್ದಂತೆಯೇ, ಬಾವಿಯಿಂದ ಏಕಾಏಕಿ ಬೆಂಕಿ ಜ್ವಾಲೆ ಕಾಣಿಸಿಕೊಂಡಿತ್ತು.
ಮಾಡಿದ ಹೂಡಿಕೆ ವ್ಯರ್ಥವಾಗಬಾರದೆಂದು ರೆತ್ನಮ್ಮ ಒಂದು ಧೈರ್ಯವಾದ ನಿರ್ಧಾರ ತೆಗೆದುಕೊಂಡರು. ಬೋರ್ವೆಲ್ನಿಂದ ಹೊರಬರುವ ಅನಿಲವನ್ನು ನೇರವಾಗಿ ಅಡುಗೆಮನೆಗೆ ಲಿಂಕ್ ಮಾಡಿದರು.
ಹೀಗೆ ಬಂದ ಗ್ಯಾಸ್ನಿಂದ ಅವರು ಮೊದಲಿಗೆ ಕಾಫಿ ಮಾಡಿದರು. ಈ ಕಾಫಿಯ ವಾಸನೆ, ರುಚಿಯಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ,ಎಂದು ಅವರು ಹೇಳುತ್ತಾರೆ.
https://www.newsics.com/2026/03/21/raymond-group-owner-gautam-singhanias-boat-sank-in-the-maldives/