newsics.com
ಭಾರತ ಗೌರವ ಆಚಾರ್ಯ ರತ್ನ ಶ್ರೀ 108 ದೇಶಭೂಷಣ ಮಹಾರಾಜರ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕೊಥಳಿ -ಕುಪ್ಪಾನವಾಡಿ ಶಾಂತಿಗಿರಿ ಟ್ರಸ್ಟ್ ಮತ್ತು ಬೇಡಕಿಹಾಳ ಗ್ರಾಮದ ಪ್ರೀತಿಯ “ಉಷಾರಾಣಿ” ಎಂಬ ಆನೆ ಹೃದಯಘಾತದಿಂದ ನಿಧನ ಹೊಂದಿದೆ. ಇದರಿಂದ ಕೊಥಳಿ -ಕುಪ್ಪಾನವಾಡಿಯಲ್ಲಿ ಶೋಕ ಮಡುಗಟ್ಟಿದೆ.
ಆಶ್ರಮದ ಆಡಳಿತ ಮಂಡಳಿ ಜೈನ ವಿಧಿ ವಿಧಾನಗಳಪ್ರಕಾರ ಅಂತ್ಯಕ್ರಿಯೆ ನಡೆಸಿದ್ದಾರೆ. ಉಷಾರಾಣಿ ಆನೆ ಹಲವು ವರ್ಷಗಳಿಂದ ನಿಪಣಿ ತಾಲೂಕಿನ ಬೇಡ್ಕಿಹಾಳದ ಪಾಟೀಲ್ ಜಮೀನಿನಲ್ಲಿ ವಾಸಿಸುತ್ತಿತ್ತು. ಎಲ್ಲರ ಅಚ್ಚುಮೆಚ್ಚಿನ ಆನೆಯಾಗಿದ್ದ ಉಷಾರಾಣಿ ಸಾವಿನ ಸುದ್ದಿ ಕೇಳಿ ಬೇಡ್ಕಿಹಾಳ್, ಶಮನೇವಾಡಿ, ಚಾಂದಶೀರ್ದವಾಡ, ಬೋರಗಾಂವ, ಕೊಥಳಿ ಕುಪ್ಪನವಾಡಿ ಭಾಗದ ಜನರು ಉಷಾರಾಣಿಯ ಅಂತಿಮ ದರ್ಶನ ಪಡೆಯಲು ಜಮಾಯಿಸಿದ್ದರು.
ಮಾವುತ ಬಾಸು ಲಕ್ಷ್ಮೀಶ್ವರ್ ಅವರು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಈ ಆನೆಯನ್ನು ನೋಡಿಕೊಳ್ಳುತ್ತಿದ್ದರು. ಅವರ ದೈನಂದಿನ ಸ್ನಾನ, ವಾರಕ್ಕೊಮ್ಮೆ ವೈದ್ಯಕೀಯ ಆರೈಕೆ, ಶುದ್ಧ ನೀರು, ಆಹಾರದ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತಿತ್ತು. ಉಷಾರಾಣಿ ದಿಢೀರ್ ಅಗಲಿರುವುದರಿಂದ ಬೇಡಕಿಹಾಳ ಸೇರಿದಂತೆ ಗಡಿ ಭಾಗದಲ್ಲಿ ಶೋಕ ಮಡುಗಟ್ಟಿದೆ.