https://youtube.com/shorts/meQfr5hOsT4?si=–SvccKUHgJJVjWK
Subscribe ನ್ಯೂಸಿಕ್ಸ್ ಕನ್ನಡ
newsics.com
ರಾಯಚೂರು: ಮದುವೆಗೆ ಒಂದು ತಿಂಗಳು ಇರುವಾಗಲೇ ಯುವಕನೋರ್ವ ನಾಪತ್ತೆಯಾಗಿದ್ದು, ಕಳೆದ 20 ದಿನಗಳಿಂದ ಹುಡುಕಾಟ ನಡೆಸಿದ್ರೂ ಪತ್ತೆಯಾಗಿಲ್ಲ. ಈ ಸಂಬಂಧ ಯುವಕನ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ರಾಯಚೂರು ಜಿಲ್ಲೆ ಮಾನ್ವಿ ತಾ. ಬೆಟ್ಟದೂರು ಗ್ರಾಮದ ನಿವಾಸಿ 25 ವರ್ಷದ ಮುದ್ದುರಂಗಪ್ಪ ಕಾಣೆಯಾಗಿದ್ದಾನೆ. ಮದುವೆ ಪೂರ್ವ ತಯಾರಿ ಹಿನ್ನೆಲೆ ಮನೆದೇವರಿಗೆ ತೆರಳಿ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಬಾಡೂಟ ಸಹ ಹಾಕಿಸಲಾಗಿತ್ತು.
ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಮುದುರಂಗಪ್ಪನನ್ನು ಅಜ್ಜಿ ನಾಗಮ್ಮ ಬೆಳೆಸಿದ್ದರು. ಇದೀಗ ಮೊಮ್ಮಗನಿಗೆ ಹೆಣ್ಣು ಹುಡುಕಿ ಮದುವೆಗೂ ಸಿದ್ಧತೆ ಮಾಡಿಕೊಂಡಿದ್ದರು.
ಅಜ್ಜಿ ನಾಗಮ್ಮ, ಮೊಮ್ಮಗ ಬರಲಿ ಎಂದು ಗ್ರಾಮದೇವತೆಗೆ ಹರಕೆ ಕಟ್ಟಿಕೊಂಡಿದ್ದೇನೆ. ಹರಕೆ ಹಿನ್ನೆಲೆ ಮೊಮ್ಮಗ ಸಿಗೋವರೆಗೂ ಉಪವಾಸ ಮಾಡುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ. ಮಂತ್ರಾಲಯ,ಆಂಧ್ರತೆಲಂಗಾಣ,ಯಾದಗಿರಿ,ಕಲಬುರ್ಗಿ,ಕೊಪ್ಪಳ,ಬಳ್ಳಾರಿ ಸೇರಿ ಹಲವೆಡೆ ಹುಡುಕಾಟ ನಡೆಸಲಾಗಿದೆ.
https://www.newsics.com/2026/02/21/sexual-assault-on-9-female-students-accused-arrested/