https://youtube.com/shorts/2dkIPQOWaBI?si=yWrxSqwrmu8x_ve-
Subscribe ನ್ಯೂಸಿಕ್ಸ್ ಕನ್ನಡ
newsics.com
ಸರ್ಕಾರಿ ಶಾಲೆಯಲ್ಲಿ ಖನಿಜಾಂಶದ ಮಾತ್ರೆ ಸೇವಿಸಿದ್ದ 59 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಶಾಲೆಯಲ್ಲಿ ನಡೆದಿದೆ.
ಅರಳಿಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅನಿಮಿಯಾ ತಡೆಗಟ್ಟಲು ಶಾಲೆಯಲ್ಲಿ ವಾರಕ್ಕೆ ಒಮ್ಮೆ ವಿದ್ಯಾರ್ಥಿಗಳಿಗೆ ಖನಿಜಾಂಶದ ಮಾತ್ರೆ ನೀಡಲಾಗುತ್ತದೆ.
ಅದರಂತೆ ಇಂದು ಕೂಡ ಮಾತ್ರೆ ಕೊಡಲಾಗಿತ್ತು. ಮಧ್ಯಾಹ್ನ ಊಟದ ಬಳಿಕ ವಿದ್ಯಾರ್ಥಿಗಳಿಗೆ ಖನಿಜಾಂಶದ ಮಾತ್ರೆ ಕೊಡಲಾಗಿತ್ತು. ಮಾತ್ರೆ ಸೇವಿಸ ಕೆಲ ಸಮಯದಲ್ಲೇ ಇಬ್ಬರು ಮಕ್ಕಳು ಹೊಟ್ಟೆ ನೋವು ಎಂದು ಹೇಳಿದ್ದರು.
ಬಳಿಕ 59 ವಿದ್ಯಾರ್ಥಿಗಳು ಒಮ್ಮೆಲೆ ಹೊಟ್ಟೆನೋವೆಂದು ಒದ್ದಾಡಲಾರಂಭಿಸಿದ್ದಾರೆ. ಖನಿಜಾಂಶದ ಮಾತ್ರೆ ಸೇವಿಸಿದ ಒಂದು ಗಂಟೆಯಲ್ಲಿ ವಿದ್ಯಾರ್ಥಿಗಳಿಗೆ ರಿಯಾಕ್ಷನ್ ಆಗಿದೆ. ಈ ಶಾಲೆಯಲ್ಲಿ ಒಟ್ಟು 200 ವಿದ್ಯಾರ್ಥಿಗಳಿದ್ದಾರೆ. ಅಸ್ವಸ್ಥ ವಿದ್ಯಾರ್ಥಿಗಳನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿರುವ ಡಿಹೆಚ್ ಒ ವಿದ್ಯಾರ್ಥಿಗಳ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಶಾಲೆ ಹಾಗೂ ಆಸ್ಪತ್ರೆಗಳಿಗೆ ಬಿಇಒ ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುದ್ದಿನ ಗಂಡನಿಗಾಗಿ ಇಬ್ಬರು ಹೆಂಡಿರ ಜಗಳ: ಸಮಸ್ಯೆ ಬಗೆಹರಿಸಲು ಊರಿನ ಮುಖಂಡರು ಮಾಡಿದ್ದೇನು?