Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವಿಷ್ಣುವಿನ ಭಕ್ತರು ಎಲ್ಲಾ ಏಕಾದಶಿಯಂದು ಉಪವಾಸ ಮಾಡುತ್ತಾರೆ. ಆದರೆ, ವೈಕುಂಠ ಏಕಾದಶಿಯನ್ನು ಸರ್ವಶ್ರೇಷ್ಠವೆಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿನದ ಉಪವಾಸವು ಉಳಿದ 23 ಏಕಾದಶಿ ತಿಥಿಗಳಲ್ಲಿ ವ್ರತವನ್ನು ಆಚರಿಸುವುದಕ್ಕೆ ಸಮಾನವಾಗಿದೆ ಎಂದು ಹೇಳಲಾಗುತ್ತೆ.
ಈ ದಿನ ಶ್ರೀ ವಿಷ್ಣುವನ್ನು ಪೂಜಿಸುವುದು, ಉಪವಾಸ ಮಾಡುವುದು ಮತ್ತು ದಾನ ಮಾಡುವುದು ಸಹ ಬಹಳ ಪುಣ್ಯವೆಂದು ಪರಿಗಣಿಸಲಾಗಿದೆ. ಹಾಗಾದರೆ ವೈಕುಂಠ ಏಕಾದಶಿಯಂದು ಯಾವ ಯಾವ ವಸ್ತುಗಳನ್ನು ದಾನ ಮಾಡುವುದು ಶುಭ ಮತ್ತು ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ವೈಕುಂಠ ಏಕಾದಶಿಯನ್ನು ಮೋಕ್ಷ ಏಕಾದಶಿ ಎಂದೂ ಕರೆಯುತ್ತಾರೆ. ದಶಮಿ ದಿನದಿಂದಲೇ ಏಕಾದಶಿ ಉಪವಾಸವನ್ನು ಪ್ರಾರಂಭಿಸಬೇಕು. ದಶಮಿ ದಿನದಂದು ಸ್ವಲ್ಪ ಪ್ರಮಾಣದ ಆಹಾರವನ್ನು ಮಾತ್ರ ತೆಗೆದುಕೊಳ್ಳಬೇಕು. ವಿಷ್ಣುವನ್ನು ಪೂಜಿಸುವ ಮೂಲಕ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು.
ಏಕಾದಶಿ ಉಪವಾಸದ ದಿನ ಹಗಲಿನಲ್ಲಿ ನಿದ್ರೆ ಮಾಡಬಾರದು. ಆದರೆ ಮಕ್ಕಳು, ವೃದ್ಧರು ಮತ್ತು ರೋಗಿಗಳಿಗೆ ಏಕಾದಶಿ ಉಪವಾಸದಿಂದ ವಿನಾಯಿತಿ ನೀಡಲಾಗಿದೆ. ಏಕಾದಶಿ ಉಪವಾಸವನ್ನು ಆಚರಿಸುವವರನ್ನು ಅಪಹಾಸ್ಯ ಮಾಡುವುದು ಮಹಾಪಾಪವೆಂದು ಪರಿಗಣಿಸಲಾಗಿದೆ. ಅಲ್ಲದೆ, ಏಕಾದಶಿಯ ದಿನದಂದು ತುಳಸಿ ಎಲೆಗಳನ್ನು ಕೀಳಬಾರದು ಮಾಡಬಾರದು. ಅಗತ್ಯವಿರುವ ಪ್ರಮಾಣದ ತುಳಸಿ ಎಲೆಗಳನ್ನು ಹಿಂದಿನ ದಿನ ಕಿತ್ತು ಇಡಿ.
ವೈಕುಂಠ ಏಕಾದಶಿಯಂದು, ರಾತ್ರಿಯಿಡೀ ಎಚ್ಚರವಾಗಿದ್ದು ವಿಷ್ಣುವಿನ ನಾಮವನ್ನು ಜಪಿಸಬೇಕು. ಏಕಾದಶಿಯಂದು ಸಂಪೂರ್ಣ ಉಪವಾಸ ಆಚರಿಸುವವರು ಯಾವುದೇ ಆಹಾರ ಸೇವಿಸಬಾರದು. ಕುಡಿಯುವ ನೀರಿನ ಮೇಲೆ ಯಾವುದೇ ನಿಷೇಧವಿಲ್ಲ. ತುಳಸಿಯು ದೇಹಕ್ಕೆ ಶಾಖವನ್ನು ನೀಡುವ ಗುಣವನ್ನು ಹೊಂದಿರುವುದರಿಂದ, ಏಳು ಬಾರಿ ತುಳಸಿ ನೀರನ್ನು ಕುಡಿಯಬಹುದು. ಆ ರಾತ್ರಿ ವಿಷ್ಣು ದೇವಾಲಯಗಳಲ್ಲಿ ನಡೆಯುವ ವಿಶೇಷ ಪೂಜೆಗಳಲ್ಲಿ ಭಾಗವಹಿಸುವುದು ಮತ್ತು ವೈಕುಂಠದ ಮೂಲಕ ದರ್ಶನ ಪಡೆಯುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.
ಮಾರ್ಗಶಿರ ಮಾಸದಲ್ಲಿ ಏಕಾದಶಿ ಉಪವಾಸ ಆಚರಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ಸಿಗುತ್ತದೆ ಮತ್ತು ಕೇವಲ ನೀರು ಸೇವಿಸುವುದರಿಂದ ಹೊಟ್ಟೆ ಶುದ್ಧವಾಗುತ್ತದೆ ಎಂಬುದು ಪ್ರಾಚೀನ ನಂಬಿಕೆ. ವೈಕುಂಠ ಏಕಾದಶಿ ಉಪವಾಸವನ್ನು ಸರಿಯಾಗಿ ಆಚರಿಸಿದರೆ ಸ್ವರ್ಗದ ದ್ವಾರಗಳು ತೆರೆದುಕೊಳ್ಳುತ್ತವೆ ಮತ್ತು ದೇವರು ಮೋಕ್ಷವನ್ನು ನೀಡುತ್ತಾನೆ ಎಂದು ಭಕ್ತರು ನಂಬುತ್ತಾರೆ.