Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶುವಿಗೆ ಗಾಯವಾದ ಗಂಭೀರ ಘಟನೆ ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಸಿಜೆರಿಯನ್ ಶಸ್ತ್ರಚಿಕಿತ್ಸೆ ವೇಳೆ ಶಿಶುವಿನ ತಲೆ ಭಾಗಕ್ಕೆ ಬ್ಲೇಡ್ ತಗುಲಿ ಗಾಯವಾಗಿದ್ದು, ‘ಏನೂ ಆಗಲ್ಲ’ ಎಂದು ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಾರ್ಮಲ್ ಡೆಲಿವರಿ ಸಾಧ್ಯವಿಲ್ಲವೆಂದು ಹೇಳಿ ಆಪರೇಷನ್ ಮಾಡಲಾಗಿದ್ದು, ಘಟನೆಯ ನಂತರ ವೈದ್ಯರು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.
ಹಾವೇರಿ ನಗರದ ಹೊಸನಗರ ನಿವಾಸಿಗಳಾದ ಮಹ್ಮದ್ ಮುಜಾಯಿದ್ ಮತ್ತು ಬಿಬಿ ಅಪ್ಸಾ ಮುಲ್ಲಾ ದಂಪತಿಗೆ ಸೇರಿದ ನವಜಾತ ಶಿಶುವಿಗೆ ಈ ದುರ್ಘಟನೆ ಸಂಭವಿಸಿದೆ.
ಶುಕ್ರವಾರ ಮಧ್ಯಾಹ್ನ ಗರ್ಭಿಣಿ ಮಹಿಳೆಯನ್ನು ನೋವು ಹೆಚ್ಚಾದ ಹಿನ್ನೆಲೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗರ್ಭದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದ ವೈದ್ಯರು, ನಾರ್ಮಲ್ ಡಿಲಿವರಿ ಸಾಧ್ಯವಿಲ್ಲ, ತಕ್ಷಣ ಸಿಜೆರಿಯನ್ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಕುಟುಂಬದವರಿಗೆ ಭಯ ಹುಟ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕುಟುಂಬದವರು ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡಿದ್ದಾರೆ.
ಆಪರೇಷನ್ ವಾರ್ಡ್ನಿಂದ ಶಿಶುವನ್ನು ಹೊರತಂದ ವೇಳೆ, ಮಗುವಿನ ತಲೆ ಭಾಗದಲ್ಲಿ ಸ್ಪಷ್ಟವಾಗಿ ಬ್ಲೇಡ್ ಗಾಯ ಕಂಡುಬಂದಿದೆ. ಇದನ್ನು ಗಮನಿಸಿದ ಪಾಲಕರು ಬೆಚ್ಚಿಬಿದ್ದು ವೈದ್ಯರನ್ನು ಪ್ರಶ್ನಿಸಿದ್ದಾರೆ. ಮಗುವಿಗೆ ಏನಾಯ್ತು? ಎಂದು ಕೇಳಿದಾಗ, ವೈದ್ಯೆ ಸ್ವಾತಿ ಅವರು ಗರ್ಭದಲ್ಲಿ ನೀರು ಕಡಿಮೆ ಇದ್ದ ಕಾರಣ ಶಸ್ತ್ರಚಿಕಿತ್ಸೆ ವೇಳೆ ತಲೆಗೆ ಬ್ಲೇಡ್ ತಗುಲಿದೆ, ಆದರೆ ಏನೂ ಆಗಲ್ಲ ಎಂದು ಉತ್ತರಿಸಿ ಅಲ್ಲಿಂದ ತೆರಳಿದ್ದಾರೆ ಎಂಬ ಗಂಭೀರ ಆರೋಪ ಪಾಲಕರಿಂದ ಕೇಳಿಬಂದಿದೆ.
ಮೆಟ್ರೋ ರೈಲಲ್ಲಿ ಯುವತಿಯ ಮೈ ಮುಟ್ಟಿ ಅಸಭ್ಯ ವರ್ತನೆ: ಪೊಲೀಸರಿಂದ ಎಚ್ಚರಿಕೆ
ಗುರು ಸುಧೀಂದ್ರ ಕಾಲೇಜು ವಿದ್ಯಾರ್ಥಿನಿ ರಶ್ಮಿಯ ಕನಸೆಲ್ಲ ನುಚ್ಚುನೂರು…