Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಮನೆಗೆ ಆಯಾ ಸ್ಪರ್ಧಿಗಳ ಫ್ಯಾಮಿಲಿ ಬರ್ತಾನೇ ಇದೆ. ಆದರೆ, ಯಾರೂ ಬಿಗ್ ಬಾಸ್ ಮನೆಯ ಮೂಲಕ ನಿಯಮ ಉಲ್ಲಂಘನೆ ಮಾಡಿರಲಿಲ್ಲ. ಆದರೆ, ಕಾವ್ಯ ಫ್ಯಾಮಿಲಿ ಆ ನಿಯಮ ಉಲ್ಲಂಘನೆ ಮಾಡಿದೆ. ಅದರಿಂದ ಕಾವ್ಯ ಶೈವ ಕಣ್ಣೀರು ಹಾಕುವಂತೆ ಆಗಿದೆ.
ಮನೆಗೆ ಬಂದವರು ವಾಪಾಸ್ ಮನೆಗೆ ಹೋಗುವ ಸ್ಥಿತಿ ನಿರ್ಮಾಣ ಆಗಿದೆ. ಬಿಗ್ ಬಾಸ್ ನಿಯಮ ಉಲ್ಲಂಘನೆ ವಿಷಯ ಹೇಳಿಯೇ ಬಿಟ್ಟಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ .
ಕಾವ್ಯ ಶೈವ ಎರಡು ರೀತಿಯ ಫೀಲಿಂಗ್ ಅಲ್ಲಿಯೇ ಇದ್ದಾರೆ. ಒಂದು ಕಡೆಗೆ ಖುಷಿ ಆಗಿದೆ. ಮನೆಯಿಂದ ಅಮ್ಮ ಬಂದಿದ್ದಾರೆ. ಸಹೋದರ ಕಾರ್ತಿಕ್ ಕೂಡ ಬಂದಿದ್ದಾರೆ.
ಕ್ಷಮೆ ಕೇಳಿದರು ಕಾವ್ಯ ಶೈವ
ಈ ಖುಷಿಯಲ್ಲಿಯೇ ಇದ್ದ ಕಾವ್ಯ ಶೈವ ಕಣ್ಣೀರು ಹಾಕುವಂತಹ ಸ್ಥಿತಿನೂ ಬಂದಿದೆ. ಮನೆಗೆ ಬಂದವರು ಮಾತಿನ ಭರದಲ್ಲಿಯೇ ಹೇಳಲೇಬಾರದ ವಿಷಯವನ್ನು ಹೇಳಿಕೊಂಡಿದ್ದಾರೆ. ಇದರಿಂದ ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘನೆ ಆಗಿದೆ. ಹಾಗಾಗಿಯೇ ಬಿಗ್ ಬಾಸ್ ಆಯಕ್ಷನ್ ತೆಗೆದುಕೊಂಡು ಬಿಟ್ಟಿದ್ದಾರೆ.
ಮನೆಯವರು ಮನೆಗೆ ಹೋದ್ರೆ
ಕಾವ್ಯ ಶೈವ ಖುಷಿ ಬಹಳ ಹೊತ್ತು ಉಳಿಯಲಿಲ್ಲ ಅನಿಸುತ್ತದೆ. ಅಮ್ಮನ ನೋಡಿ ತಪ್ಪಿಕೊಂಡಿರೋದು ಇದೆ. ಸಹೋದರನನ್ನ ನೋಡಿ ಖುಷಿಪಟ್ಟಿದ್ದು ಇದೆ.
ಆದರೆ, ಜಸ್ಟ್ ಮಾತ್ ಮಾತ್ ಅಲ್ಲಿ ಅನ್ನುವ ಹಾಗೆ ಮಾತಿನ ಮಧ್ಯೆ ಎಲ್ಲವೂ ಶೇರ್ ಆಗಿದೆ. ಇದರಿಂದ ಬಿಗ್ ಬಾಸ್ ರಾಂಗ್ ಆಗಿದ್ದಾರೆ. ನಿಯಮ ಉಲ್ಲಂಘನೆ ಆಗಿದೆ ಅಂತ ಹೇಳಿದ್ದಾರೆ. ಕಾವ್ಯ ಮನೆಯವರನ್ನ ಹೊರಗೆ ಕಳಿಸುವ ಕೆಲಸವನ್ನು ಮಾಡಿದಂತೆ ಇದೆ. ಇದರಿಂದ ಕಾವ್ಯ ಶೈವ ಕಣ್ಣೀರು ಹಾಕುವಂತೆ ಆಗಿದೆ.
ಕಾವ್ಯ ಶೈವ ಅವರಿಗೆ ತಪ್ಪಿನ ಅರಿವಾಗಿದೆ. ಆ ಕೂಡಲೆ ಬಿಗ್ ಬಾಸ್ ಬಳಿ ಕ್ಷಮೆನೂ ಕೇಳಿದ್ದಾರೆ. ಆದರೆ, ಬಿಗ್ ಬಾಸ್ ಇದಕ್ಕೆ ಕರಗಿದರೆ. ಕಾವ್ಯ ಅವರ ಮನೆಯವರಿಗೆ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟರೇ ? ಈ ಎಲ್ಲ ಪ್ರಶ್ನೆಗಳೂ ಇವೆ.ಕಾರಣ, ಸದ್ಯ ಪ್ರೋಮೋದಲ್ಲಿ ಬಿಗ್ ಬಾಸ್ ಆದೇಶ ಮಾಡಿರೋದು ಇದೆ. ಕಾವ್ಯ ಕ್ಷಮೆ ಕೇಳಿರೋದು ಇದೆ. ಕಾವ್ಯ ಮನೆಯವರು ಬಂದಿರೋದು ಇದೆ. ಆದರೆ, ಬಿಗ್ ಬಾಸ್ ಅಲ್ವೇ? ಏನ್ ಬೇಕಾದರೂ ಆಗಬಹುದು. ಹಾಗಾಗಿಯೇ ಈಗಲೇ ಏನ್ ಆಗುತ್ತದೆ ಅಂತ ಹೇಳೋಕೆ ಬರೋದಿಲ್ಲ ಬಿಡಿ.
ದೊಡ್ಮನೆ ಫ್ಯಾಮಿಲಿ ರೌಂಡ್
ದೊಡ್ಮನೆಯಲ್ಲಿ ಈ ವಾರ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಗಿಲ್ಲಿ ನಟನ ತಂದೆ ಮತ್ತು ತಾಯಿ ಬಂದಿದ್ದಾರೆ. ರಕ್ಷಿತಾ ಶೆಟ್ಟಿ ಅಮ್ಮ ಬಂದಿದ್ದಾರೆ. ಸೂರಜ್ ಸಿಂಗ್ ಅಮ್ಮ ಹಾಗೂ ಅಕ್ಕ ಬಂದು ಹೋಗಿದ್ದಾರೆ. ಕಾವ್ಯ ಶೈವ ಅವರ ಅಮ್ಮ ಮತ್ತು ತಮ್ಮ ಬಂದು ಹೋಗಿದ್ದಾರೆ. ಹಾಗೆ ಇನ್ನು ಯಾರೆಲ್ಲ ಬರ್ತಾರೆ ಅನ್ನುವ ಕುತೂಹಲವು ಇದೆ ಅಂತ ಹೇಳಬಹುದು.