Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕನಿಷ್ಠ 9 ಮಂದಿ ಸಜೀವ ದಹನವಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್ಗೆ ಎದುರಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಬಸ್ನ ಚಾಲಕ ಮತ್ತು ನಿರ್ವಾಹಕ ತಕ್ಷಣವೇ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದ ಬಗ್ಗೆ ಸೀ ಬರ್ಡ್ ಟ್ರಾವೆಲ್ಸ್ ಮಾಲೀಕ ನಾಗರಾಜಯ್ಯ ಮನಬಿಚ್ಚಿ ಮಾತಾಡಿದ್ದಾರೆ. ನನಗೆ ಸುದ್ದಿ ಕೇಳಿ ಆಘಾತ ಆಯ್ತು, ದೇವರು ಎಲ್ಲರನ್ನೂ ಬದುಕಿಸಬೇಕಿತ್ತು ಅಂತ ಹೇಳಿದ್ರು. ಬಸ್ನಲ್ಲಿ ಎಲ್ಲಾ ಸುರಕ್ಷತೆ ಇತ್ತು, ಆದ್ರೂ ವಿಧಿ ಹೀಗೆ ಮಾಡ್ತು ಅಂತ ನೊಂದುಕೊಂಡ್ರು. ಈ ಸುದ್ದಿ ನನಗೆ ಅಪಘಾತ ಆದಾಗಲೇ ಗೊತ್ತಾಯ್ತು. ತುಂಬಾ ನೋವು ಕೊಟ್ಟಿತು ಅಂತ ಹೇಳಿದರು.
ನಮ್ಮ ಬಸ್ನಲ್ಲಿ ಯಾವುದೇ ಟೆಕ್ನಿಕಲ್ ಪ್ರಾಬ್ಲಂ ಇರ್ಲಿಲ್ಲ. ಎಲ್ಲಾ ‘ಎಮರ್ಜೆನ್ಸಿ ಡೋರ್’ಗಳು ಪಕ್ಕಾ ಕಂಡೀಷನ್ನಲ್ಲಿ ಇದ್ವು, ವರ್ಕ್ ಆಗ್ತಿದ್ವು. ಅದಕ್ಕೆ ಸಾಕ್ಷಿ ಅಂದ್ರೆ, ಕ್ಲೀನರ್ ಸೇರಿದಂತೆ ಕೆಲವರು ಅದೇ ದಾರಿಯಿಂದ ಆರಾಮಾಗಿ ಹೊರಗೆ ಬಂದಿದ್ದಾರೆ. ಡೋರ್ ಜಾಮ್ ಆಗಿದ್ರೆ ಯಾರೂ ಬರೋಕೆ ಆಗ್ತಿರ್ಲಿಲ್ಲ. ಆದ್ರೂ ಯಾಕೆ ಹೀಗಾಯ್ತು ಗೊತ್ತಾಗ್ತಿಲ್ಲ ಅಂತ ಹೇಳಿದ್ರು.ನಾಗರಾಜಯ್ಯ ಅವರು ಅಪಘಾತ ನಡೆದ ಜಾಗದ ಬಗ್ಗೆಯೂ ಒಂದು ಪ್ರಮುಖ ವಿಷ್ಯ ಹೇಳಿದ್ರು. ನಾವು ನೋಡಿದ ಹಾಗೆ ಆ ರೋಡ್ನಲ್ಲಿ, ಅದ್ರಲ್ಲೂ ಆ ನಿರ್ದಿಷ್ಟ ಜಾಗದಲ್ಲೇ ಅತಿ ಹೆಚ್ಚು ಅಪಘಾತಗಳು ನಡೀತಾ ಇರುತ್ತವೆ. ಪದೇ ಪದೇ ಅಲ್ಲಿಯೇ ವಾಹನಗಳು ಡಿಕ್ಕಿ ಆಗಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಅಂತ ಹೇಳಿದ್ರು.