Subscribe ನ್ಯೂಸಿಕ್ಸ್ ಕನ್ನಡ NewsicsKannada /YouTube
newsics.com
ಬೆಂಗಳೂರು: ಸಿಬ್ಬಂದಿಯ ಕಣ್ತಪ್ಪಿನಿಂದ ಕರ್ಣಾಟಕ ಬ್ಯಾಂಕ್ ಎಲ್ಲಾ ಹಣ ಪೂರ್ಣ ಖಾಲಿಯಾದ ಘಟನೆ ನಡೆದಿದೆ.
ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಸಿಬ್ಬಂದಿಯೊಬ್ಬರು ಅಚಾತುರ್ಯದಿಂದ ಬೇರೊಂದು ಖಾತೆಗೆ ವರ್ಗಾವಣೆ ಮಾಡಿ ಕರ್ಣಾಟಕ ಬ್ಯಾಂಕನ್ನೇ ಸಂಕಷ್ಟಕ್ಕೆ ಸಿಲುಕಿಸಿದ ಘಟನೆ ನಡೆದಿದೆ.
ಕರ್ನಾಟಕ ಬ್ಯಾಂಕ್ ಸಿಬ್ಬಂದಿಯಿಂದ ಆದ ಎಡವಟ್ಟಿಗೆ ಬ್ಯಾಂಕ್ ಬುಡ ಅಲುಗಾಡುವಂತೆ ಆಗಿತ್ತು. ಬ್ಯಾಂಕ್ ಸಿಬ್ಬಂದಿ ಮಾಡಿದ ಒಂದು ತಪ್ಪಿನಿಂದ ಕರ್ನಾಟಕ ಬ್ಯಾಂಕ್ನಲ್ಲಿ ವಿವಿದ ಗ್ರಾಹಕರು ಠೇವಣಿ, ಇತರ ರೂಪದಲ್ಲಿ ಇಟ್ಟಿದ್ದ ಒಟ್ಟು ಮೊತ್ತದಲ್ಲಿ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ ಹಣ ಇತರ ಬ್ಯಾಂಕ್ ಅಕೌಂಟ್ಗೆ ವರ್ಗಾವಣೆ ಆಗಿದೆ ಎಂದು ಮನಿ ಕಂಟ್ರೋಲ್ ವಿಶೇಷ ವರದಿಯೊಂದನ್ನು ಪ್ರಕಟಿಸಿದೆ.
ಒಂದೇ ಟ್ರಾನ್ಸಾಕ್ಷನ್ನಲ್ಲಿ ಇಷ್ಟು ಮೊತ್ತದ ಹಣವನ್ನು ವರ್ಗಾವಣೆ ಮಾಡಲಾಗಿದೆ. ಇದನ್ನು ಬ್ಯಾಂಕ್ ಭಾಷೆಯಲ್ಲಿ ಫ್ಯಾಟ್ ಫಿಂಗರ್ ಎರರ್ ಅಥವಾ ಕಣ್ತಪ್ಪಿನಿಂದ ಆದ ಅಚಾತುರ್ಯ ಎಂದು ಕರೆಯಲಾಗುತ್ತದೆ.
ಬ್ಯಾಂಕ್ ನಿರ್ಲಕ್ಷ್ಯಕ್ಕೆ ಆರ್ಬಿಐ ಗರಂ:
1,00,000 ಕೋಟಿ ರೂಪಾಯಿ ಮೊತ್ತವನ್ನು ನಿಷ್ಕ್ರಿಯ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಬಚಾವ್ ಆಗಿದ್ದಾರೆ. ಕಾರಣ ಖಾತೆ ನಿಷ್ಕ್ರಿಯವಾಗಿದ್ದ ಕಾರಣ ಈ ಹಣ ಯಾವುದೇ ರೀತಿಯಲ್ಲಿ ಬಳಕೆಯಾಗಿಲ್ಲ. ಆದರೆ ಬರೋಬ್ಬರಿ 3 ಗಂಟೆಗಳ ಬಳಿಕ ಈ ಹಣ ವಾಪಸ್ ಪಡೆಯಲಾಗಿದೆ.
ಈ ಘಟನೆ ನಡೆದಿರುವುದು ಆಗಸ್ಟ್ 8, 2023ರಂದು ಸಂಜೆ 5.17ಕ್ಕೆ ಹಣ ವರ್ಗಾವಣೆ ಮಾಡಲಾಗಿತ್ತು. ಹರಸಾಹಸ ಮಾಡಿದ ಸಿಬ್ಬಂದಿ ರಾತ್ರಿ 8 ಗಂಟೆ (8:09) ಹೊತ್ತಿಗೆ ಹಣ ಮರಳಿ ಪಡೆಯಲಾಗಿದೆ.
ಹಣ ಕಣ್ತಪ್ಪಿನಿಂದ ಆಗಿದೆಯೋ ಅಥವಾ ಇನ್ಯಾವುದೋ ಉದ್ದೇಶದಿಂದ ಆಗಿದೆಯೋ ಎಂದು ಆರ್ಬಿಐ ಗರಂ ಆಗಿದೆ. 2023ರಲ್ಲಿ ಈ ಹಣ ವರ್ಗಾವಣೆ ಆಗಿದೆ. ಆದರೆ ಕರ್ಣಾಟಕ ಬ್ಯಾಂಕ್ ಮಾರ್ಚ್ 11, 2024ರಲ್ಲಿ ಈ ಕುರಿತು ವಿವರವಾದ ವರದಿ ನೀಡುವಂತೆ ರಿಸ್ಕ್ ಮ್ಯಾನೇಜ್ಮೆಂಟ್ ತಂಡಕ್ಕೆ ಸೂಚಿಸಿತ್ತು. ಐಟಿ ವಿಭಾಗ ಮಾರ್ಚ್ 15, 2024ರಲ್ಲಿ ವಿವರವಾದ ವರದಿ ಸಲ್ಲಿಕೆ ಮಾಡಿತ್ತು. ಮಾರ್ಚ್ 28 ರಂದು ಪಿಪಿಟಿ ಪ್ರಸೆಂಟೇಶನ್ ಮಾಡಿ ವಿವರಣೆ ನೀಡಿತ್ತು.
ಆದರೆ ಕಣ್ತಪ್ಪಿನಿಂದ ಆಗಿರುವ ತಪ್ಪು ವಿಳಂಬವಾಗಿ ಸರಿ ಮಾಡಿರುವುದು ಹಾಗೂ ಆಡಿಟ್ ವರದಿಯಲ್ಲಿ ವಿಳಂಬವಾಗಿ ಉಲ್ಲೇಖಿಸಿರುವುದಕ್ಕೆ ಆರ್ಬಿಐ ಗರಂ ಆಗಿತ್ತು.