newsics.com
ಮಂಗಳವಾರ ನಡೆದ ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸುಪ್ರೀಂಕೋರ್ಟ್ನಲ್ಲಿರುವ ಭದ್ರತಾ ಸಿಬ್ಬಂದಿಗೆ ಹಿರಿಯ ವಕೀಲರನ್ನು ನ್ಯಾಯಾಲಯದಿಂದ ಹೊರತಳ್ಳುವಂತೆ ಆದೇಶಿಸಿದ್ದಾರೆ.
ನ್ಯಾಯಮೂರ್ತಿಗಳು ಈ ರೀತಿ ಕಟುವಾಗಿ ಹೇಳಿದ ನಂತರ ವಕೀಲರು ಕೋರ್ಟ್ ರೂಂನಿಂದ ಹೊರ ನಡೆದಿದ್ದಾರೆ. ನೀಟ್-ಯುಜಿ ವಿಚಾರಣೆ ವೇಳೆ ಮತ್ತೊಬ್ಬ ವಕೀಲರ ವಾದಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಹಿರಿಯ ವಕೀಲ ಮ್ಯಾಥ್ಯೂಸ್ ನೆಡುಂಪಾರ ಅವರನ್ನು ಸಿಜೆಐ ಟೀಕಿಸಿದ್ದಾರೆ.