Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > movie controversy ಬೆಂಗಳೂರು ಯುವತಿಯರು ಡಗಾರ್‌ಗಳಂತೆ, ಬೆಂಗ್ಳೂರಂದ್ರೆ ಪಾರ್ಟಿ, ಡ್ರಗ್ಸ್ ಅಷ್ಟೇ… ಹೊಸ ವಿವಾದ ಹುಟ್ಟುಹಾಕಿದ ಮಲಯಾಳಂ ಸಿನಿಮಾ
ದೇಶಪ್ರಮುಖಮನರಂಜನೆ

movie controversy ಬೆಂಗಳೂರು ಯುವತಿಯರು ಡಗಾರ್‌ಗಳಂತೆ, ಬೆಂಗ್ಳೂರಂದ್ರೆ ಪಾರ್ಟಿ, ಡ್ರಗ್ಸ್ ಅಷ್ಟೇ… ಹೊಸ ವಿವಾದ ಹುಟ್ಟುಹಾಕಿದ ಮಲಯಾಳಂ ಸಿನಿಮಾ

Share
2 Min Read
SHARE

newsics.com

ಮಲಯಾಳಂನ ‘ಲೋಕಃ: ಚಾಪ್ಟರ್ 1- ಚಂದ್ರ’ ಸಿನಿಮಾದಲ್ಲಿ (Lokah) ಬೆಂಗಳೂರಿಗರಿಗೆ ಅವಮಾನ ಮಾಡುವ ಪದ ಬಳಕೆಯಾಗಿದೆ.

ಬಾಲಿವುಡ್‌ನ ‘ಪರಮ ಸುಂದರಿ’ ಸಿನಿಮಾ ವಿಚಾರದಲ್ಲಿ ಕೇರಳದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ತಮ್ಮ ಭಾಷೆಯನ್ನು ಸಿನಿಮಾದಲ್ಲಿ ಸರಿಯಾಗಿ ಚಿತ್ರಿಸಲಾಗಿಲ್ಲ ಎಂದು ಸಿನಿಮಾ ವಿರುದ್ಧ ಕೇರಳದಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು.

ಇದರ ಬೆನ್ನಲ್ಲೇ ಲೋಕಃ ಸಿನಿಮಾದಲ್ಲಿ ಬೆಂಗಳೂರು ಹುಡುಗಿಯರನ್ನು ‘ಡಗಾರ್’ ಎಂದು ಹಿಯಾಳಿಸಲಾಗಿದೆ. ಬೆಂಗಳೂರನ್ನು ಕೇವಲ ಪಾರ್ಟಿ, ಡ್ರಗ್ಸ್ಗಳಿಗೆ ಮಾತ್ರ ಎಂದು ಚಿತ್ರಿಸಿರುವ ರೀತಿ ಚರ್ಚೆಯನ್ನು ಹುಟ್ಟುಹಾಕಿದೆ.

ಸಿನಿಮಾದಲ್ಲಿ ಬರುವ ನಾಚಿಯಪ್ಪ ಗೌಡನಿಗೆ (ಸ್ಯಾಂಡಿ) ಮದುವೆ ಆಫರ್ ನೀಡಲಾಗುತ್ತದೆ. ಆದರೆ, ಆತ, ‘ನಾನು ಮದುವೆ ಆಗೋಕೆ ಒಪ್ಪಿಕೊಳ್ಳೋದಿಲ್ಲ ಎಂದಲ್ಲ. ಇಲ್ಲಿಯವರನ್ನು ಮದುವೆ ಆಗಲ್ಲ. ಇಲ್ಲಿಯವರು ಡಗಾರ್‌ಗಳು’ ಎಂದು ಹೇಳುತ್ತಾನೆ. ಇಡೀ ಬೆಂಗಳೂರು ಯುವತಿಯರು/ಮಹಿಳೆಯರನ್ನು ಈ ರೀತಿ ಕರೆದಿರುವುದು ಭಾರೀ ಚರ್ಚೆ ಹುಟ್ಟುಹಾಕಿದೆ. ಈ ವಾಕ್ಯವನ್ನು ತೆಗೆದು ಹಾಕಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ.

‘ಲೋಕಃ’ ಸಿನಿಮಾದಲ್ಲಿ ಸಾಕಷ್ಟು ಪಾರ್ಟಿ ದೃಶ್ಯಗಳು, ಅದರಲ್ಲಿ ಡ್ರಗ್ ಬಳಕೆ ತೋರಿಸಲಾಗಿದೆ. ಅದು ಕಾಮನ್ ಎಂಬ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ಕೂಡ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಹೊರ ಜಗತ್ತಿಗೆ ನೋಡುವವರಿಗೆ ‘ಬೆಂಗಳೂರು ಇಷ್ಟಕ್ಕೆ ಸೀಮಿತವಾ’ ಎಂಬ ಪ್ರಶ್ನೆ ಹುಟ್ಟುಹಾಕುವಂತೆ ಮಾಡುತ್ತವೆ ಈ ದೃಶ್ಯಗಳು.

ನಾಚಿಯಪ್ಪ ಗೌಡ ಪಾತ್ರ ಮಾಡಿದ್ದು ಸ್ಯಾಂಡಿ. ಅವರು ಮೂಲತಃ ತಮಿಳುನಾಡಿನವರು. ಈ ಪಾತ್ರಕ್ಕೆ ಕನ್ನಡದವರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ ಎಂದು ಅನೇಕರು ಹೇಳಿದ್ದಾರೆ. ಪಾತ್ರದ ಹೆಸರಷ್ಟೇ ನಾಚಿಯಪ್ಪ ಗೌಡ. ಆದರೆ, ಅವರು ಮಾತನಾಡೋದು ತಮಿಳು ಶೈಲಿಯಲ್ಲಿ. ಇದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡಿದೆ.

‘ನೀವು ಎಲ್ಲಿಗೆ ಹೋಗಬೇಕು’ ಎಂದು ಆಟೋದವನು ಕೇಳುತ್ತಾನೆ. ‘ಕನ್ನಡ್ ಗೊತ್ತಿಲ್ಲ’ ಎನ್ನುತ್ತಾನೆ ಕಥಾ ನಾಯಕ. ಇದನ್ನು ಅಣಕಿಸುವ ರೀತಿಯಲ್ಲಿ ತೋರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕನ್ನಡ ಸಿನಿಮಾದಲ್ಲಿ ಕೊಚ್ಚಿಗೋ ಅಥವಾ ಮಲಯಾಳಂ ಭಾಷೆಯನ್ನು ಈ ರೀತಿ ಅವಮಾನ ಮಾಡಿದ್ದರೆ ಅಲ್ಲಿಯವರು ಉಗ್ರ ಪ್ರತಿಭಟನೆಯನ್ನೇ ಮಾಡುತ್ತಿದ್ದರು ಎನ್ನುವ ಮಾತುಗಳು ಕೇಳಿಬಂದಿವೆ.

‘ಲೋಕಃ’ ಸಿನಿಮಾ ಒಂದೊಳ್ಳೆಯ ಪ್ರಯತ್ನ. ಇಡೀ ಚಿತ್ರದ ಕಥೆ ಬೆಂಗಳೂರಿನಲ್ಲೇ ಸಾಗುತ್ತದೆ. ಆದರೆ, ಈ ರೀತಿಯ ತಪ್ಪುಗಳಿಂದ ಸಿನಿಮಾ ಟೀಕೆಗೆ ಗುರಿಯಾಗಿದೆ. ಈ ಚಿತ್ರವನ್ನು ದುಲ್ಖರ್ ಸಲ್ಮಾನ್ ನಿರ್ಮಾಣ ಮಾಡಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್ ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

https://x.com/mansore25/status/1962453149350015043?t=awycCIV9rIzPKYT5c2bD8A&s=19

https://x.com/veer_santhosh18/status/1962208562912141384?t=yZy1RRU8EhfsbFI_HLi5mQ&s=19

TAGGED:Bengaluru is all about parties and drugs... A movie that sparked a new controversyBengaluru young women are like dagaars
Share This Article
Facebook Twitter Copy Link Print
Previous Article ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗುತ್ತಿದ್ದೀರಾ? ಹಾಗಾದ್ರೆ ಎದ್ದ ತಕ್ಷಣ ಈ ರೀತಿ ಮಾಡಿ
Next Article ಸಿನಿಮಾ ನೋಡಲು ಥಿಯೇಟರ್’ಗೆ ಜನ ಬರದಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದುಕೊಂಡ ನಿರ್ದೇಶಕ : ವೈರಲ್ ವಿಡಿಯೋ ನೋಡಿ

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
Crimeದೇಶ

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?