newsics.com
ದಕ್ಷಿಣ ಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕನೊಬ್ಬ ದೂರು ನೀಡಿರುವುದು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿದೆ. ಅನಾಮಿಕನ ದೂರಿನ ಬೆನ್ನಲ್ಲೇ ತನಿಖೆಗಾಗಿ ಎಸ್ಐಟಿ ಕೂಡ ರಚನೆಯಾಗಿತ್ತು. ಕಳೆದ 13 ದಿನಗಳಿಂದ ಎಸ್ಐಟಿ ತಂಡ ಧರ್ಮಸ್ಥಳದಲ್ಲಿ ಕಾರ್ಯಾಚರಣೆ ನಡೆದಿದೆ.
ಎಸ್ಐಟಿ ಈಗಾಗಲೇ ಅರ್ಧ ತಿಂಗಳು ಕೆಲಸ ಮಾಡಿದೆ. ಕಳೆದೆರಡು ವಾರಗಳಿಂದ ಎಸ್ಐಟಿ ಸಮಾಧಿ ಅಗೆದು ಶೋಧ ನಡೆಸಲಾಗುತ್ತಿದೆ
ಇದೀಗ ಅನಾಮಿಕ ದೂರುದಾರನ ಹೇಳಿಕೆ ಆಧರಿಸಿ ಎಸ್.ಐ.ಟಿ ತಂಡ ಹಲವು ಪಾಯಿಂಟ್ಗಳಲ್ಲಿ ಉತ್ಖನನ ಮಾಡಿ ಪ್ರಕರಣದ ವರದಿಯನ್ನು ಗೃಹಸಚಿವರಿಗೆ ಸಲ್ಲಿಸಿದೆ
ಅನಾಮಿಕ ನೀಡಿದ ದೂರಿನ ಮೇಲೆ ರಾಜ್ಯ ಸರ್ಕಾರದಿಂದ ರಚನೆಯಾದ ಎಸ್ಐಟಿ 14 ದಿನಗಳಿಂದ ತನಿಖೆ ನಡೆಸುತ್ತಿದ್ದು, ಇಷ್ಟು ದಿನಗಳ ವರದಿಯನ್ನು ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಗೃಹಸಚಿವ ಜಿ. ಪರಮೇಶ್ವರ್ ಅವರಿಗೆ ಸಲ್ಲಿಸಿದ್ದಾರೆ.
ನೇತ್ರಾವತಿ ನದಿ ದಡದ ಪಾಯಿಂಟ್ ನಂ.13ರಲ್ಲಿ ನಿನ್ನೆಯಿಂದ ಅಸ್ಥಿಪಂಜರಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೇ ಸುಮಾರು 32 ಅಡಿ ಆಳ, 25 ಅಡಿ ಅಗಲ, 12 ಅಡಿ ಉದ್ದ ತೋಡಿದರೂ ಯಾವುದೇ ಅಸ್ಥಿ ಪಂಜರಗಳು ದೊರೆತಿಲ್ಲ. ಹೀಗಾಗಿ ಇನ್ಮುಂದೆ ಈ ಅನಾಮಿಕ ತೋರಿಸುವ ಸ್ಥಳಗಳಲ್ಲಿ ಉತ್ಖನನ ನಡೆಸುವುದು ಬಹುತೇಕ ಅನುಮಾನ ಎನ್ನಲಾಗಿದೆ.
ವಿಧಾನಸೌಧದಲ್ಲಿ ಗೃಹ ಸಚಿವ ಪರಮೇರ್ಶವರ್ರವರನ್ನು ಭೇಟಿಯಾದ ಪ್ರಣಬ್ ಮೊಹಾಂತಿ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ
ಇದೀಗ ಎಸ್.ಐ.ಟಿ ಅಧಿಕಾರಿಗಳು ಈ ಕಳೇಬರಗಳ ಹುಡುಕಾಟದ ಶೋಧ ಕಾರ್ಯಾಚರಣೆ ಬ್ರೇಕ್ ಹಾಕಲು ಮುಂದಾಗಿದ್ದು, , ಈ ಶೋಧಕಾರ್ಯಾಚರಣೆ ವೇಳೆ ಏನೆಲ್ಲಾ ಲಭ್ಯವಾಗಿದೆ ಎಂಬುದರ ಕುರಿತು ವರದಿ ಸಲ್ಲಿಸಿದ್ದಾರೆ.
https://www.newsics.com/2025/08/13/rain-warning-again-yellow-alert-issued-for-these-districts/