newsics.com
ನವದೆಹಲಿ: ‘ಜೈನ ದೇಗುಲಗಳ ಪಟ್ಟಣ’ ಖ್ಯಾತಿಯ ಗುಜರಾತಿನ ಪಾಲಿತಾನಾ ನಗರದಲ್ಲಿ ಮಾಂಸಾಹಾರ ಕಾನೂನುಬಾಹಿರ ಎಂದು ಅಧಿಕೃತವಾಗಿ ಘೋಷಿಸಲಾಗಿದ್ದು, ಈ ಮೂಲಕ ಜಗತ್ತಿನ ಮೊದಲ ಸಸ್ಯಾಹಾರಿ ನಗರವಾಗಿ ಹೊರಹೊಮ್ಕಿದೆ.
ಗುಜರಾತಿನ ಭಾವನಗರ ಜಿಲ್ಲೆಯ ಪಾಲಿತಾನಾ ನಗರದಲ್ಲಿ ಸಂಪೂರ್ಣ ಸಸ್ಯಾಹಾರಿ ಜನರೇ ಇದ್ದಾರೆ. ಇದು ನಮ್ಮ ದೇಶ ಮಾತ್ರವಲ್ಲದೆ ವಿಶ್ವದ ಮೊದಲ ಸಸ್ಯಾಹಾರಿ ನಗರ ಎಂದೇ ಹೆಸರುವಾಸಿಯಾಗಿದೆ.
ಹೀಗಾಗಿ ಈ ನಗರವನ್ಮು ಸಸ್ಯಾಹಾರಿಗಳ ಸ್ವರ್ಗ ಎಂದೂ ಕರೆಯುತ್ತಾರೆ. ಏಕೆಂದರೆ ಈ ಸ್ಥಳದಲ್ಲಿ ವಾಸಿಸುವ ಹೆಚ್ಚು ಜನ ಜೈನ ಸಮುದಾಯದವರೇ ಇದ್ದಾರೆ.
ಮಾಂಸ ಮಾರಾಟ, ಮಾಂಸಾಹಾರ ಸೇವನೆ, ಪ್ರಾಣಿ ಹತ್ಯೆ ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಎಂದು ಘೋಷಿಸಿದ ಬಳಿಕ ಮಾಂಸಾಹಾರವನ್ನು ಅಧಿಕೃತವಾಗಿ ನಿಷೇಧಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಾಲಿತಾನಾ ನಗರದ ಸುಮಾರು 250 ಕಸಾಯಿಖಾನೆಗಳನ್ನು ಮುಚ್ಚಬೇಕೆಂದು ಒತ್ತಾಯಿಸಿ ಸುಮಾರು 200 ಜೈನ ಸನ್ಯಾಸಿಗಳು ಪ್ರತಿಭಟನೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭಾರತವು ಹೆಚ್ಚಿನ ಮಾಂಸಾಹಾರಿ ಜನಸಂಖ್ಯೆಯನ್ನು ಹೊಂದಿದ್ದರೂ, ಇನ್ನೂ ಅನೇಕ ರಾಜ್ಯಗಳಲ್ಲಿ ಇಂದಿಗೂ ಸಸ್ಯಾಹಾರಿಗಳೇ ಇದ್ದಾರೆ.
ಉಳಿದವರು ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಮಾಂಸಾಹಾರ ತ್ಯಜಿಸುತ್ತಾರೆ ಮತ್ತು ಈ ವೇಳೆ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಾರೆ.
ನಮ್ಮ ದೇಶದಲ್ಲಿ ಹೆಚ್ಚು ಸಸ್ಯಾಹಾರ ಸೇವಿಸುವ ರಾಜ್ಯಗಳ ಪಟ್ಟಿ ಗಮನಿಸಿದರೆ, ರಾಜಸ್ಥಾನವು ಅಗ್ರಸ್ಥಾನದಲ್ಲಿದೆ. ರಾಜಸ್ಥಾನದ ಜನಸಂಖ್ಯೆಯ 74.9% ಸಸ್ಯಾಹಾರಿಗಳೇ ಇದ್ದಾರೆ.
ಹರಿಯಾಣ ಎರಡನೇ ಸ್ಥಾನದಲ್ಲಿದೆ. ಅಲ್ಲಿನ ಜನಸಂಖ್ಯೆಯಲ್ಲಿ 69.25% ಸಸ್ಯಾಹಾರಿಗಳು ಇದ್ದಾರೆ.
ಪಂಜಾಬ್ ಮೂರನೇ ಸ್ಥಾನದಲ್ಲಿದೆ. ಈ ರಾಜ್ಯವು ಗೋಧಿಯ ಅತಿದೊಡ್ಡ ಉತ್ಪಾದಕವಾಗಿದೆ. ಇಲ್ಲಿನ ಜನಸಂಖ್ಯೆಯ 66.75% ಸಸ್ಯಾಹಾರಿಗಳು.
ಗುಜರಾತ್ ನಾಲ್ಕನೇ ಸ್ಥಾನದಲ್ಲಿದ್ದು, ಇಲ್ಲಿನ ಜನಸಂಖ್ಯೆಯ 60.95% ಜನರು ಸಸ್ಯಾಹಾರಿಗಳಿದ್ದಾರೆ.
ಮಧ್ಯಪ್ರದೇಶ ಐದನೇ ಸ್ಥಾನದಲ್ಲಿದೆ. ಈ ರಾಜ್ಯದ ಜನಸಂಖ್ಯೆಯ ಸುಮಾರು 50.6% ಸಸ್ಯಾಹಾರಿಗಳೇ ತುಂಬಿದ್ದಾರೆ.
ಈ ಪಟ್ಟಿಯಲ್ಲಿ ಉತ್ತರ ಪ್ರದೇಶ ಆರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಹಲವು ಪುಣ್ಯಕ್ಷೇತ್ರಗಳಿವೆ.. ಇಲ್ಲಿನ ಶೇ.47.1ರಷ್ಟು ಜನರು ಸಸ್ಯಾಹಾರಗಳನ್ನೇ ತಿನ್ನುತ್ತಾರೆ.
ಮಹಾರಾಷ್ಟ್ರದಲ್ಲಿಯೂ ಸಸ್ಯಾಹಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯದ ಜನಸಂಖ್ಯೆಯ 40.2% ಸಸ್ಯಾಹಾರಿಗಳಿದ್ದಾರೆ. ಈ ಪಟ್ಟಿಯಲ್ಲಿ ದೆಹಲಿ 8ನೇ ಸ್ಥಾನದಲ್ಲಿದೆ. ಅನೇಕ ರಾಜ್ಯಗಳ ಜನರು ರಾಷ್ಟ್ರ ರಾಜಧಾನಿಯಲ್ಲಿ ವಾಸಿಸುತ್ತಿದ್ದರೂ, ಅದರ ಜನಸಂಖ್ಯೆಯ 39.5% ಸಸ್ಯಾಹಾರಿಗಳೇ ಇದ್ದಾರೆ.
ಉತ್ತರಾಖಂಡದಲ್ಲಿ ಶೇಕಡಾ 27.35 ಮತ್ತು ಕರ್ನಾಟಕದಲ್ಲಿ ಶೇಕಡಾ 21.1 ರಷ್ಟು ಜನರು ಸಸ್ಯಾಹಾರ ಸೇವಿಸುತ್ತಿದ್ದಾರೆ.
ಗಂಗಾನದಿಯ ದಡದಲ್ಲಿರುವ ಪವಿತ್ರ ನಗರ ಋಷಿಕೇಶದಲ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ಹೊರತಾಗಿ, ಪವಿತ್ರ ಗಂಗಾನದಿಯ ತೀರದಲ್ಲಿರುವ ಅತ್ಯಂತ ಹಳೆಯ ನಗರವಾದ ವಾರಾಣಸಿಯಲ್ಲಿ ಸಹ ಸಸ್ಯಾಹಾರವನ್ನು ಮಾತ್ರ ಕಾಣಬಹುದು.
ಪವಿತ್ರ ಗಂಗಾನದಿಯ ದಡದಲ್ಲಿರುವ ಪ್ರಕಾಶಮಾನವಾದ ನಗರವಾದ ಹರಿದ್ವಾರದಲ್ಲಿ ಸಹ ಮಾಂಸವನ್ನು ನಿಷೇಧಿಸಲಾಗಿದೆ.
ತಮಿಳುನಾಡಿನ ಹೃದಯಭಾಗ ಮಧುರೈ, ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆ, ತಮಿಳುನಾಡಿನ ಮಧುರೈ ಮತ್ತು ಉತ್ತರ ಪ್ರದೇಶದ ವೃಂದಾವನದಲ್ಲಿ ಮಾಂಸ ಸಿಗುವುದಿಲ್ಲ.
ಆನೆಯ ಡೆಡ್ಲಿ ಅಟ್ಯಾಕ್ನಿಂದ ಬೇಲೂರಿನ ವ್ಯಕ್ತಿ ಪಾರು: ವಿಡಿಯೊ ಭಾರೀ ವೈರಲ್
ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ ಹಣ ದುರ್ಬಳಕೆ ಆರೋಪ: ಬಿಜೆಪಿ ಮಾಜಿ ಎಂಎಲ್ಸಿ ವೀರಯ್ಯ ಬಂಧನ
ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದ ಸಾರ್ವಜನಿಕರ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆ!