ಅಕ್ರಮ ಸಂಬಂಧಕ್ಕೆ ಅಡ್ಡಿಯಾಗ್ತಾರೆ ಎಂದು ತಾಳಿ ಕಟ್ಟಿದ ಗಂಡ ಮತ್ತು ಹೆತ್ತ ಮಕ್ಕಳನ್ನೇ ಕೊಲ್ಲಲು ಈ ಪಾಪಿ ತಾಯಿ ಮುಂದಾಗಿದ್ದಾಳೆ.
ಈ ಘಟನೆ ಹಾಸನದ ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ನಡೆದಿದೆ. 11 ವರ್ಷದ ಹಿಂದೆಯೇ ಚೈತ್ರಾ – ಗಜೇಂದ್ರ ಮದ್ವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ.
ತಾಳಿ ಕಟ್ಟಿದ್ದ ಗಂಡ, ಹೆತ್ತ ಮಕ್ಕಳು ಮತ್ತು ಅತ್ತೆ, ಮಾವನಿಗೆ ಆಹಾರದಲ್ಲಿ ವಿಷದ ಮಾತ್ರೆ ಹಾಕಿ ಅವರನ್ನು ಕೊಲ್ಲಲು ಮುಂದಾಗಿದ್ದಾಳೆ. ಇದನ್ನು ಅರಿಯದೇ ವಿಷಮಿಶ್ರಿತ ಊಟ ತಿಂದ ಮನೆಯವರು ಅನಾರೀಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಪತ್ನಿ ಚೈತ್ರಾ ವಿರುದ್ಧ ಪತಿ ಗಜೇಂದ್ರನೇ ಪೊಲೀಸರಿಗೆ ದೂರು ನೀಡಿದ್ದಾರೆ.
ಒಂದು ವರ್ಷದಿಂದ ಅದೇ ಗ್ರಾಮದ ಶಿವು ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಬಾರಿ ಅನೈತಿಕ ಸಂಬಂಧ ಬಯಲಾಗದಂತೆ ಚೈತ್ರಾ ಎಚ್ಚರ ವಹಿಸಿದ್ದಳು, ನಂತರ ಇದಕ್ಕೆ ಮನೆಯವರು ಅಡ್ಡಿಯಾಗ್ತಾರೆ ಎಂದು ಅವರನ್ನೇ ಕೊಲ್ಲುವ ಪ್ಲಾನ್ ಮಾಡಿದ್ದಾಳೆ.