newsics.com
ಕೊಪ್ಪಳ : ಹಳೆಯ ಆಸ್ತಿ ವಿವಾದಕ್ಕೆ ಯುವಕನನ್ನು ಸಂಬಂಧಿಕರೇ ಮಧ್ಯರಾತ್ರಿಯಲ್ಲಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ 31ರ ತಡ ರಾತ್ರಿ ತಾವರಗೇರಾ ಪಟ್ಟಣದ ಸಿಂಧನೂರು ಸರ್ಕಲ್ ಬಳಿ ನಡೆದಿದೆ.
ಚನ್ನಪ್ಪ ನಾರಿನಾಳ (35) ಹತ್ಯೆಯಾದ ಯುವಕ.ಕೊಲೆ ನಡೆದು ಕೇವಲ ಎರಡೇ ನಿಮಿಷಗಳಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು. ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಪ್ರಕರಣ ಸಂಬಂಧ ತಾವರಗೇರಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚನ್ನಪ್ಪ ನಾರಿನಾಳ ಹಾಗೂ ಆರೋಪಿಗಳಾದ ರವಿ ನಾರಿನಾಳ ನಡುವೆ ಹಲವು ವರ್ಷಗಳಿಂದ ಆಸ್ತಿ ಕಲಹ ನಡೆದು ಬರುತ್ತಿತ್ತು. ಈ ಹಿಂದೆ ಇದೇ ಕಾರಣಕ್ಕೆ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದೆ. ಕೊಲೆಗೂ ಮುನ್ನ ನಿಂದಿತನಾಗಿ ಆರೋಪಿಗಳ ಪೈಕಿ ನಾಗರಾಜ ನಾರಿನಾಳನು ವಾಟ್ಸಪ್ ಸ್ಟೇಟಸ್ನಲ್ಲಿ ಮಚ್ಚುಗಳ ಪೋಟೋ ಹಾಕಿದ್ದುದು ಇದೀಗ ಬೆಳಕಿಗೆ ಬಂದಿದೆ. ಈ ಸ್ಟೇಟಸ್ ವೈರಲ್ ಆಗಿದೆ. ಪೂರ್ವಯೋಜಿತವಾಗಿ ಪ್ಲಾನ್ ಮಾಡಿಕೊಂಡು, ಸಂಬಂಧಿಕರೇ ಕೊಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ತಾವರಗೇರಾ ಪೊಲೀಸರು ಈಗಾಗಲೇ 8 ಮಂದಿಯನ್ನು ಬಂಧನೆ ಮಾಡಿದ್ದಾರೆ. ಒಟ್ಟು 10 ಜನರ ವಿರುದ್ಧ ಪ್ರಕರಣ ದಾಖಲಾಗಿ
ದೆ.