newsics.com
ಬೀದರ್: ಎರಡು ವರ್ಷದ ಮಗನ ಎದುರಲ್ಲೇ ದಂಪತಿಯನ್ನು ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಕೊಹಿನೂರ್ ಪಾಹಾಡ್ ಗ್ರಾಮದ ಬಳಿ ನಡೆದಿದೆ.
ರಾಜು ಕೊಳಸುರೆ(28) ಶಾರದಾ(27) ಮೃತಪಟ್ಟ ದಂಪತಿ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಜಾಫರ್ ವಾಡಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಜಾಫರವಾಡಿಯ ದತ್ತಾತ್ರೇಯ ಮತ್ತು ತುಕಾರಾಮ ಅವರು ದಂಪತಿ ಕೊಲೆಗೈದ ನಂತರ ಪೊಲೀಸರಿಗೆ ಶರಣಾಗಿದ್ದಾರೆ. ದತ್ತಾತ್ರೇಯ ತಂಗಿಯ ಜೊತೆಗೆ ರಾಜು ಅನೈತಿಕ ಸಂಬಂಧ ಹೊಂದಿದ್ದು, ಇಬ್ಬರು ಜೊತೆಗಿರುವ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇದರಿಂದ ಕೋಪಗೊಂಡು ರಾಜು ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮಾತನಾಡುವ ನೆಪದಲ್ಲಿ ತಂಗಿಯಿಂದಲೇ ಕರೆ ಮಾಡಿಸಿ ಮುಂಬೈನಿಂದ ಜಾಫರವಾಡಿಗೆ ರಾಜನನ್ನು ಕರೆಸಿಕೊಂಡು ಹತ್ಯೆ ಮಾಡಲಾಗಿದೆ.