newsics.com
ಮೈಸೂರು: ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಸರಿ ಸುಮಾರು 5 ವರ್ಷಗಳ ಹಿಂದೆ ನಡೆದ ಘಟನೆಗೆ ರೋಚಕ ತಿರುವನ್ನು ಪಡೆದುಕೊಂಡಿದೆ. ಪತ್ನಿ ನಾಪತ್ತೆಯಾಗಿದ್ದಾಳೆ ಪತಿಯಿಂದ ದೂರು. ಮೃತ ಪತ್ನಿಯ ಶವಕ್ಕೆ ಪತಿಯಿಂದ ಅಂತ್ಯಸಂಸ್ಕಾರ. ಪತ್ನಿಯನ್ನು ಕೊಲೆಗೈದ ಆರೋಪದ ಅಡಿ ಪತಿ ಜೈಲು . 5 ವರ್ಷದ ನಂತರ ಮೃತ ಪತ್ನಿ ದಿಢೀರ್ ಪ್ರತ್ಯಕ್ಷ.
ಏನಿದು ಪ್ರಕರಣ?2021ರಲ್ಲಿ ಪತಿ ಸುರೇಶ್ ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಹೆಂಡತಿ ನಾಪತ್ತೆಯಾಗಿದ್ದಾಳೆ ಅಂತ ದೂರು ದಾಖಲಿಸಿದ್ದ. ದೂರು ಕೊಟ್ಟ ಸ್ವಲ್ಪ ದಿನಗಳಲ್ಲೇ ಒಂದು ಶವ ಸಿಗುತ್ತೆ. ಬಳಿಕ ಪೊಲೀಸರು ನೀನೇ ನಿನ್ನ ಹೆಂಡತಿಯನ್ನ ಕೊಲೆ ಮಾಡಿದ್ದೀಯಾ ಎಂದು ಆತನನ್ನ ಜೈಲಿಗೆ ಕಳಿಹಿಸುತ್ತಾರೆ. ನಂತರ ಕೋರ್ಟ್ ಅನುಮತಿಯಂತೆ ಮಲ್ಲಿಗೆ ತಾಯಿ ಗೌರಿ ಅನುಮತಿ ಪಡೆದು ಡೆಡ್ಬಾಡಿನ ಪರೀಕ್ಷೆ ಮಾಡಿಸಿ ಸುರೇಶ್ ಕೈಯಲ್ಲೇ ಅಂತ್ಯಸಂಸ್ಕಾರ ಕೂಡ ಮಾಡಿಸುತ್ತಾರೆ. ಆದ್ರೆ, ಶವಸಂಸ್ಕಾರ ಮಾಡಿದ ಅಸ್ಥಿಪಂಜರ ಮತ್ತು ಹೆಂಡತಿ ಮಲ್ಲಿಗೆ ತಾಯಿಯ ಗೌರಿಯ ಡಿಎನ್ಎ ಪರಿಕ್ಷೆ ವರದಿ ಸರಿ ಬಂದಿರ್ಲಿಲ್ಲ.ಹೀಗಾಗಿ ಹೆಂಡತಿ ಸತ್ತಿಲ್ಲ ಬದುಕಿದ್ದಾಳೆ ಎಂದು ಕೋರ್ಟ್ ಎರಡು ವರ್ಷಗಳ ನಂತ್ರ ಗಿರೀಶ್ ಬೇಲ್ ಕೊಟ್ಟು ಜೈಲಿನಿಂದ ಬಿಡುಗಡೆ ಮಾಡುತ್ತೆ.4 ವರ್ಷದಿಂದ ನಾಪತ್ತೆಯಾಗಿದ್ದ ಮಲ್ಲಿಗೆ ಏ.1 ರಂದು ಮಡಿಕೇರಿಯ ಹೋಟೆಲಿಗೆ ಪ್ರಿಯಕರನೊಂದಿಗೆ ಬಂದಿದ್ದಾಳೆ. ಈ ವೇಳೆ ಅಲ್ಲಿ ಸುರೇಶ್ ಅವರ ಸ್ನೇಹಿತರು ಆಕೆಯ ಫೋಟೋವನ್ನು ತೆಗೆದು ಸುರೇಶ್ ಅವರಿಗೆ ಮತ್ತು ಪೊಲೀಸರಿಗೆ ನೀಡಿದ್ದಾರೆ. ಕೂಡಲೇ ಪೊಲೀಸರು ಮಲ್ಲಿಗೆ ನೆಲೆಸಿರುವ ಜಾಗವವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಮೈಸೂರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
https://www.newsics.com/2025/04/03/heavy-rain-in-silicon-city/