newsics.com
ಚಾಮರಾಜನಗರ: ಅನಾರೋಗ್ಯ ಪೀಡಿತನನ್ನು ಡೋಲಿಯ ಮೂಲಕ ಆಸ್ಪತ್ರೆಗೆ ಸಾಗಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತುಳಸಿಕೆರೆ ಎಂಬ ಗ್ರಾಮದಲ್ಲಿ ನಡೆದಿದೆ.
ರಸ್ತೆ ಇಲ್ಲದೆ ಅಂಬುಲೆನ್ಸ್ ಬಾರದ ಕಾರಣ ರೋಗಿ ಮತ್ತು ಸ್ಥಳೀಯರು ಪರದಾಟ ನಡೆಸಿದ್ದಾರೆ.
ಹನೂರು ತಾಲೂಕಿನ ತುಳಸಿಕೆರೆ ಗ್ರಾಮದಲ್ಲಿ ಈ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಬಳಲಿ ನಿತ್ರಾಣರಾಗಿದ್ದ ಪುಟ್ಟ ಎಂಬ ವ್ಯಕ್ತಿಯನ್ನು 8 ಕಿಲೋಮೀಟರ್ ವರೆಗೂ ಹೊತ್ತುಕೊಂಡು ಜನರು ತಮಿಳುನಾಡಿನ ಗೋಳಮತ್ತುರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗ್ರಾಮಕ್ಕೆ ಸೌಕರ್ಯ ಕಲ್ಪಿಸುವಂತೆ ಇದೀಗ ಜನರು ಒತ್ತಾಯಿಸುತ್ತಿದ್ದಾರೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಕನಿಷ್ಠ ಮೂಲಭೂತ ಸೌಕರ್ಯವಿಲ್ಲದೆ ಡೋಲಿ ಮುಖಾಂತರ ಕರೆದೊಯ್ಯುವ ಪರಿಸ್ಥಿತಿ ಇರುವುದರ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
Waqf bill ವಕ್ಫ್ ಬಿಲ್ ಮಂಡನೆಯಾಗುತ್ತಿದ್ದಂತೇ ಥ್ಯಾಂಕ್ಯೂ ಮೋದಿಜಿ ಎಂದ ಮುಸ್ಲಿಂ ಮಹಿಳೆಯರು; ವೈರಲ್ ವಿಡಿಯೋ ನೋಡಿ