Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮಕ್ಕಳ ಶಾಲಾ ಫೀಸ್ ಪಾವತಿಸಲಾರದ ಹತಾಶೆ: ಬಕೆಟ್‌ನಲ್ಲಿ ಮುಳುಗಿಸಿ ಮಕ್ಕಳಿಬ್ಬರನ್ನು‌ ಕೊಂದು ಆತ್ಮ*ಹ*ತ್ಯೆಗೆ ಶರಣಾದ ತಂದೆ
ದೇಶಪ್ರಮುಖ

ಮಕ್ಕಳ ಶಾಲಾ ಫೀಸ್ ಪಾವತಿಸಲಾರದ ಹತಾಶೆ: ಬಕೆಟ್‌ನಲ್ಲಿ ಮುಳುಗಿಸಿ ಮಕ್ಕಳಿಬ್ಬರನ್ನು‌ ಕೊಂದು ಆತ್ಮ*ಹ*ತ್ಯೆಗೆ ಶರಣಾದ ತಂದೆ

Share
2 Min Read
SHARE

newsics.com

ಕಾಕಿನಾಡ (ಆಂಧ್ರಪ್ರದೇಶ): ಮಕ್ಕಳ ಶಾಲೆಯ ದುಬಾರಿ ಫೀಸ್ ಕಟ್ಟಲಾಗದ ತಂದೆಯೊಬ್ಬ ಬೇಸರಗೊಂಡು ತನ್ನಿಬ್ಬರು ಪುಟಾಣಿ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ಕಾಕಿನಾಡದ ಸುಬ್ಬಾರಾವ್ ನಗರದಲ್ಲಿ ನಡೆದಿದೆ.

ಮೃತ ಮಕ್ಕಳನ್ನು ಜೋಶಿಲ್ (7 ವರ್ಷ), ನಿಖಿಲ್ (6) ಎಂದು ಗುರುತಿಸಲಾಗಿದೆ. ಜೋಶಿಲ್ ಎಂಬಾತ ಒಂದನೇ ತರಗತಿಯಲ್ಲಿ ಓದುತ್ತಿದ್ದು, ನಿಖಿಲ್ ಯುಕೆಜಿಯಲ್ಲಿ ಓದುತ್ತಿದ್ದ. ಇವರಿಬ್ಬರನ್ನು ಕೊಂದ ತಂದೆ ವಾನಪಳ್ಳಿ ಚಂದ್ರಕಿಶೋರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಕಿನಾಡದ ವಕಲಪುಡಿ ಎಂಬಲ್ಲಿರುವ ಕೇಂದ್ರ ಸರ್ಕಾರದ ಒಎನ್ ಜಿಸಿ ಕಚೇರಿಯಲ್ಲಿ ಅಸಿಸ್ಟಂಟ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಾಕಿನಾಡ ನಗರದ ಸುಬ್ಬಾ ರಾವ್ ನಗರದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದರು.

ಕಳೆದ ವರ್ಷ, ಇಬ್ಬರೂ ಮಕ್ಕಳಿಗೂ 2 ಲಕ್ಷ ರೂ. ಶುಲ್ಕ ಕಟ್ಟಿದ್ದ ಚಂದ್ರಕಿಶೋರ್ ಅವರು, ಈ ವರ್ಷ ಆರ್ಥಿಕ ತೊಂದರೆಗೆ ಸಿಲುಕಿ ಫೀಸ್ ಕಟ್ಟಲಾರದೆ ಒದ್ದಾಡುತ್ತಿದ್ದರು.
ಇದೇ ವಿಚಾರಕ್ಕೆ ಚಂದ್ರಕಿಶೋರ್ ಹಾಗೂ ಅವರ ಪತ್ನಿ ತನುಜಾ ಅವರೊಂದಿಗೆ ನಿತ್ಯವೂ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಚಂದ್ರಕಿಶೋರ್, ತನ್ನ ಮಕ್ಕಳನ್ನು ಬಕೆಟ್‌ನಲ್ಲಿ ಮುಳುಗಿಸಿ ಕೊಂದಿದ್ದಾನೆ ಎಂದು ಹೇಳಲಾಗಿದೆ.

ಈ ಘಟನೆ ಪತ್ನಿ ತನಜು ಮನೆಯಲ್ಲಿರಲಿಲ್ಲ. ಅವರು ಹೊರಗಡೆ ಹೋಗಿದ್ದರು. ಅವರು ಮನೆಗೆ ಬರುವಷ್ಟರಲ್ಲಿ ಹಗ್ಗದಿಂದ ಮಕ್ಕಳ ಕೈಕಾಲು ಕಟ್ಟಿದ ಚಂದ್ರಕಿಶೋರ್ ಇಬ್ಬರೂ ಮಕ್ಕಳನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾರೆ.

ನಂತರ ಬೇಸರಗೊಂಡು ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊರಗಡೆಯಿಂದ ಬಂದ ಪತ್ನಿ ತನುಜಾ ಅವರು, ಬಾಗಿಲು ಬಡಿದಿದ್ದು ಬಾಗಿಲು ಯಾರೂ ತೆಗೆದಿಲ್ಲ. ಬಾಗಿಲು ತಟ್ಟಿ ಸಾಕಾಗಿ ಬೆಡ್ ರೂಂ ಕಿಟಕಿಯಿಂದ ಬಂದು ಇಣುಕಿ ನೋಡಿದಾಗ ಅಲ್ಲಿ ಪತಿ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಆಗ, ಅಕ್ಕಪಕ್ಕದ ಮನೆಯವರನ್ನು ಕೂಗಿ ಕರೆದ ತನುಜಾ, ಅವರ ನೆರವಿನಿಂದ ಬಾಗಿಲು ಒಡೆದು ಹೋಗಿ ನೋಡಿದಾಗ ಮಕ್ಕಳೂ ಸತ್ತು ಬಿದ್ದಿರುವುದು ಕಂಡುಬಂದಿದೆ.

ಚಂದ್ರಕಿಶೋರ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ, ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳು ಒತ್ತಡದಲ್ಲಿ ಸಿಲುಕಿದ್ದಾರೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಆದ್ದರಿಂದ ಅವರ ಜೀವನವನ್ನು ಮುಗಿಸಿದ್ದೇನೆ. ನನ್ನ ಜೀವನವನ್ನೂ ಮುಗಿಸಿಕೊಳ್ಳುತ್ತಿದ್ದೇನೆ’ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದೇ ದಿನ ಎರಡು ಕಡೆ ಮಂಗಳಮುಖಿಯರ ಅಟ್ಟಹಾಸ, ಜತೆಗಿದ್ದವಳನ್ನೇ ಬೆತ್ತಲೆಗೊಳಿಸಿ, ಕೂದಲು ಕತ್ತರಿಸಿ‌ ಕ್ರೌರ್ಯ

ಔರಂಗಜೇಬನ ಸಮಾಧಿ ವಿವಾದ: ನಾಗ್ಪುರ ಉದ್ವಿಗ್ನ, ಹಲವೆಡೆ ಬೆಂಕಿ, ಕಲ್ಲು ತೂರಾಟ

TAGGED:Desperate to pay children's school fees: Father kills two children by drowning them in a bucket and ends life himself
Share This Article
Facebook Twitter Copy Link Print
Previous Article ಒಂದೇ ದಿನ ಎರಡು ಕಡೆ ಮಂಗಳಮುಖಿಯರ ಅಟ್ಟಹಾಸ, ಜತೆಗಿದ್ದವಳನ್ನೇ ಬೆತ್ತಲೆಗೊಳಿಸಿ, ಕೂದಲು ಕತ್ತರಿಸಿ‌ ಕ್ರೌರ್ಯ
Next Article ಕರ್ನಾಟಕದಲ್ಲಿ 5 ದಿನ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
Crimeದೇಶ

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?