newsics.com
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಮತ್ತೆ ಕಣ್ಣೀರು ಇಟ್ಟಿದ್ದಾರೆ.
ಹೌದು, ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್ನ ಪ್ರೊಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ಅದರಲ್ಲಿ, ಚೈತ್ರಾ ಕುಂದಾಪುರ ಹಾಗೂ ರಜತ್ ಕಿಚನ್ ಅಲ್ಲಿ ಕ್ಲೀನ್ ಮಾಡುತ್ತಿರುತ್ತಾರೆ. ಆಗ ಚೈತ್ರಾ ಬಂದು ಗಲೀಜು ಮಾಡ್ತಿದ್ದಾಳೆ ಎಂದು ರಜತ್ ಪುಕಾರು ಹೇಳುತ್ತಾರೆ. ಆಗ ಚೈತ್ರಾ ಅವರು ರಜತ್ ಮೈಗೆ ಸೋಪಿನ ನೊರೆಯನ್ನು ಅಂಟಿಸಿದ್ದಾರೆ. ಇದರಿಂದ ಕೋಪಿಸಿಕೊಳ್ಳುವ ರಜತ್, ಪ್ರತೀಕಾರ ತೀರಿಸಿಕೊಂಡಿದ್ದಾರೆ.
https://twitter.com/i/status/1871375245980193184
ನಿನ್ನೆ ಯಾರಿಗೋ ಚಳಿ, ಜ್ವರ ಬಂದಿತ್ತಲ್ಲ, ಅದು ಯಾರಿಗೆ ಅನ್ನೋ ಮೂಲಕ ಚೈತ್ರಾ ಅವರನ್ನು ರಜತ್ ರೇಗಿಸಿದ್ದಾರೆ. ಅದಕ್ಕೆ ಬೇಸರಗೊಳ್ಳುವ ಚೈತ್ರಾ, ಯಾವ ಆರೋಪಕ್ಕೆ ನನ್ನನ್ನು ಈ ರೀತಿ ಮಾಡುತ್ತಿದ್ದಾರೆ? ಇಲ್ಲಿ ಆಡಿರುವ ಒಂದೊಂದು ಮಾತುಗಳಿಗೂ, ವ್ಯಂಗ್ಯಗಳಿಗೂ ಸಮಯ ಬರಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಂತರ ದೇವರ ಮುಂದೆ ಹೋಗಿ ಕೂತಿದ್ದಾಳೆ. ಈ ವೇಳೆ ಸಮಯನೇ ಉತ್ತರ ಕೊಡುತ್ತೆ ಎಂದು ಚೈತ್ರಾ ಜೋರಾಗಿ ಹೇಳಿದ್ದಾಳೆ. ಇನ್ನು ದೇವರ ಮುಂದೆ ನ್ಯಾಯಕ್ಕೆ ಕೂತಿರುವ ಚೈತ್ರಾಗೆ ಪ್ರಸಾದ ಕೂಡ ಆಗಿದೆ. ದೇವರಿಗೆ ಮುಡಿಸಿದ್ದ ಹೂ ಬಲಬಾಗದಿಂದ ಬಿದ್ದಿದೆ.