newsics.com
ಬೆಂಗಳೂರು: ಸಿಲಿಕಾನ್ ಸಿಟಿಯ ಪೊಲೀಸರು ಹುಡುಕಾಟ ನಡೆಸಿದ್ದ ರಾಬರಿ ಗ್ಯಾಂಗ್ನ ಮಾಸ್ಟರ್ ಮೈಂಡ್ ನನ್ನು ಉತ್ತರ ಪ್ರದೇಶದ ಮುರ್ದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಫಹೀಮ್ ಅಲಿಯಾಸ್ ಎಟಿಎಂ ಎಂದು ಗುರುತಿಸಲಾಗಿದೆ. ಹೌದು,ಇಡೀ ಭಾರತದಾದ್ಯಂತ ಮನೆಗಳ್ಳತನ ಮಾಡುತ್ತಿದ್ದ ಫಹೀಮ್ಗಾಗಿ ವಿವಿಧ ರಾಜ್ಯದ ಪೊಲೀಸರು ಹುಡುಕಾಟ ನಡೆಸಿದ್ದರು.
ಜೈಲು ಸೇರಿ ಪರೋಲ್ ಮೇಲೆ ಆಚೆ ಬಂದಿದ್ದ ಫಹೀಮ್ ಬಳಿಕ ಎಸ್ಕೇಪ್ ಆಗಿ ಮತ್ತೆ ಕಳ್ಳತನಕ್ಕೆ ಇಳಿದಿದ್ದ. ಏಪ್ರಿಲ್ 24 ರಂದು ಸಹಕಾರ ನಗರದಲ್ಲಿ ಮನೆಗಳ್ಳತನ ಮಾಡಿದ್ದ. ವೈದ್ಯ ಉಮಾಶಂಕರ್ ಎಂಬುವವರ ಮನೆಗೆ ನುಗ್ಗಿ 40 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಕಳ್ಳತನದ ವೇಳೆ ಬಂದ ವೈದ್ಯನಿಗೆ ಗನ್ ತೋರಿಸಿ ಎಸ್ಕೇಪ್ ಆಗಿತ್ತು.
ಇನ್ನು ಈ ಗ್ಯಾಂಗ್ ಪ್ರಕರಣದಲ್ಲಿ ಫಹೀಮ್ ಎ 1 ಆರೋಪಿಯಾಗಿದ್ದ . ಬಳಿಕ ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು . ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಆತನ ಮನೆಯನ್ನು ನೆಲಸಮಗೊಳಿಸಿದ್ದಾರೆ.
ಈತನ ಬಂಧನದಿಂದ ಈಗ ದೇಶಾದ್ಯಂತ ಒಟ್ಟು 65 ಪ್ರಕರಣಗಳು ಬೆಳಕಿಗೆ ಬಂದಿವೆ. ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆಯಲು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಮುಂದಾಗಿದ್ದಾರೆ.