newsics.com
ಚೆನ್ನೈ: ತಮ್ಮ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿ ಮಾಡುವ ಬಗ್ಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಸ್ಟಾಲಿನ್, ‘ಉದಯ್ ಸ್ಟಾಲಿನ್, “ಬೇಡಿಕೆ ಜೋರಾಗುತ್ತಿದೆ. ಆದರೆ ಅದಕ್ಕೆ ಸಮಯ ಇನ್ನೂ ಪಕ್ವವಾಗಿಲ್ಲ. ಬದಲಾವಣೆ ಮಾತ್ರ ನಿರಂತರ ಕಾದು ನೋಡಿ. ರಾಜ್ಯ ಕ್ಯಾಬಿನೆಟ್ ನಲ್ಲಿ ಬದಲಾವಣೆಗಳಿರಲಿವೆ ಎಂದರು.
ಇನ್ನು ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿ ಮಾಡುವ ಸಂಬಂಧ ಮುಖ್ಯಮಂತ್ರಿ ಸ್ಟಾಲಿನ್ ಇತ್ತೀಚೆಗೆ ಹಿರಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ದೆಹಲಿಗೆ ತೆರಳುತ್ತಿದ್ದು, ದೆಹಲಿ ಭೇಟಿಯ ನಂತರ ಯಾವಾಗ ಬೇಕಾದರೂ ಉದಯನಿಧಿ ಉಪಮುಖ್ಯಮಂತ್ರಿ ಘೋಷಣೆ ಬರಬಹುದು ಎನ್ನಲಾಗ್ತಿದೆ. ಅದರಂತೆ ದೆಹಲಿಯಿಂದ ವಾಪಸಾದ ನಂತರ ತಮಿಳುನಾಡಿನ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಆಗಲಿದೆ.