newsics.com/ನ್ಯೂಸಿಕ್ಸ್
ಖಾರೀ (ಗಲ್ಫ್) ಪ್ರದೇಶ ಮತ್ತು ಸುತ್ತಮುತ್ತಲಿನ ಸಮುದ್ರ ತೀರಗಳಲ್ಲಿ ಉದ್ವಿಗ್ನ ಪರಿಸ್ಥಿತ ಹಿನ್ನೆಲೆಯಲ್ಲಿ, ಭಾರತೀಯ ನಾವಿಕರನ್ನು (Seafarers) ರಕ್ಷಿಸಲು ಮತ್ತು ಭಾರತದ ಕಡಲ ಹಿತಾಸಕ್ತಿಗಳನ್ನು ಕಾಪಾಡಲು ಭಾರತ ಸರ್ಕಾರವು ನಿರಂತರವಾಗಿ ನಿಗಾ ಇರಿಸಿದೆ.
ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು (MoPSW), ಶಿಪ್ಪಿಂಗ್ ಮಹಾನಿರ್ದೇಶನಾಲಯದ (DGS) ಮೂಲಕ ಹಾರ್ಮುಜ್ ಜಲಸಂಧಿ, ಒಮಾನ್ ಕೊಲ್ಲಿ ಮತ್ತು ಅದರ ಪಕ್ಕದ ಕಡಲ ಪ್ರದೇಶಗಳಲ್ಲಿನ ಬೆಳವಣಿಗೆಗಳ ಮೇಲೆ ನಿರಂತರ ಕಣ್ಗಾವಲು ಕಾಯ್ದುಕೊಂಡಿದೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ಭಾರತೀಯ ನಾವಿಕರಿಗೆ ಸಮಯಕ್ಕೆ ಸರಿಯಾಗಿ ಬೆಂಬಲ ಮತ್ತು ಸಹಾಯವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ನೌಕಾಸೇನೆ, ವಿದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳು, ಸ್ನೇಹಪರ ದೇಶಗಳ ಕಡಲ ಆಡಳಿತಗಳು, ಹಡಗು ಕಂಪನಿಗಳು, ನಾವಿಕರ ಕಲ್ಯಾಣ ಸಂಸ್ಥೆಗಳು ಮತ್ತು ಇತರ ಸಂಬಂಧಿತ ಪಾಲುದಾರರೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ.
ಹಡಗಿನ ಮಾಲೀಕರು ಮತ್ತು ಕ್ಯಾಪ್ಟನ್ಗಳು ತಕ್ಷಣವೇ ಸಮಗ್ರ ಭದ್ರತಾ ಡ್ರಿಲ್ಗಳನ್ನು ನಡೆಸಬೇಕು.
ಹಡಗಿನ ತುರ್ತು ಅಲರ್ಟ್ ವ್ಯವಸ್ಥೆಗಳನ್ನು ಮರುಪರಿಶೀಲಿಸಿ ಸೌಂಡ್ ಚೆಕ್ ಮಾಡಿಕೊಳ್ಳಬೇಕು.
ಆಧುನಿಕ ಯುದ್ಧ ತಂತ್ರಜ್ಞಾನಗಳಾದ ಡ್ರೋನ್ಗಳು, ಕ್ಷಿಪಣಿಗಳು (
ಮತ್ತು ಸ್ವಯಂಚಾಲಿತ ಸ್ಫೋಟಕ ನೌಕೆಗಳ ದಾಳಿಯ ವಿರುದ್ಧ ನಿರಂತರ ಕಣ್ಗಾವಲು ಇಡಬೇಕು.
ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣವೇ ಭಾರತದ ಸಂವಹನ ಕೇಂದ್ರ ಮತ್ತು ಇನ್ಫರ್ಮೇಷನ್ ಫ್ಯೂಷನ್ ಸೆಂಟರ್-ಇಂಡಿಯನ್ ಓಷನ್ ರೀಜನ್ (IFC-IOR) ಸಂಸ್ಥೆಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.
ಭಾರತೀಯ ನಾವಿಕರ ಕಲ್ಯಾಣ ಮತ್ತು ಭದ್ರತೆ ಅತ್ಯಂತ ಪ್ರಮುಖವಾಗಿದೆ ಎಂದು ಸರ್ಕಾರ ಮತ್ತೊಮ್ಮೆ ಪುನರುಚ್ಚರಿಸಿದೆ. ಶಿಪ್ಪಿಂಗ್ ಮಹಾನಿರ್ದೇಶನಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸೀಫಾರರ್ಸ್ ವೆಲ್ಫೇರ್ ಫಂಡ್ ಸೊಸೈಟಿ’ (SWFS), ತೊಂದರೆಗೊಳಗಾದ ನಾವಿಕರು ಮತ್ತು ಅವರ ಕುಟುಂಬಗಳಿಗೆ ಅಗತ್ಯವಿದ್ದಾಗ ಅರ್ಹ ಕಲ್ಯಾಣ ಪ್ರಯೋಜನಗಳು, ಆರ್ಥಿಕ ನೆರವು ಮತ್ತು ಇತರ ಬೆಂಬಲ ಕ್ರಮಗಳನ್ನು ವಿಸ್ತರಿಸಲು ಸಿದ್ಧವಾಗಿದೆ. ನಿಯಮಾವಳಿಗಳ ಪ್ರಕಾರ, ಎಸ್ಡಬ್ಲ್ಯೂಎಫ್ಎಸ್ (SWFS) ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದೆ.
12 ವರ್ಷ ಪೂರೈಸಿದ ಮೋದಿ ಸರ್ಕಾರದ ವಿಶೇಷ ಹಾಡು ಬಿಡುಗಡೆ ಮಾಡಿದ ಬಿಜೆಪಿ ಸಂಸದ ಮನೋಜ್ ತಿವಾರಿ