newsics.com/ನ್ಯೂಸಿಕ್ಸ್
ಜ್ಯೋತಿಷ್ಯದಲ್ಲಿ, ಕೆಲವು ಗ್ರಹಗಳು, ನಕ್ಷತ್ರಪುಂಜಗಳು ಮತ್ತು ಯೋಗಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಪಂಚಕ ಕಾಲ ವೂ ಒಂದು. ಹಿಂದೂ ಪಂಚಾಂಗದ ಪ್ರಕಾರ ಇಂದಿನಿಂದ ಪಂಚಕ ಆರಂಭವಾಗುತ್ತಿದ್ದು, ಮುಂದಿನ 5 ದಿನಗಳ ಕಾಲ ನಡೆಯಲಿದೆ. ಪಂಚಕವನ್ನು ಅತ್ಯಂತ ಅಶುಭವಾದ ಸಮಯವೆಂದು ಪರಿಗಣಿಸಲಾಗುತ್ತದೆ ಮತ್ತು ಈ ದಿನದಂದು ಯಾವುದೇ ಶುಭ ಕಾರ್ಯವನ್ನು ಮಾಡಲಾಗುವುದಿಲ್ಲ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಈ ಬಾರಿ ಇಂದು ಅಂದ್ರೆ ಜೂನ್ 6, 2026 ರಂದು ಸಂಜೆ 7.03 ಕ್ಕೆ ಶುರುವಾಗಲಿದೆ. ಐದು ದಿನಗಳ ಮೃತ್ಯು ಪಂಚಕ ಇರಲಿದ್ದು, ಜೂನ್ 11, 2026 ರಂದು ಬೆಳಿಗ್ಗೆ 8.16 ಕ್ಕೆ ಕೊನೆಗೊಳ್ಳಲಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮೃತ್ಯು ಪಂಚಕ ಸಮಯದಲ್ಲಿ ಕನಸು ವಿಶೇಷತೆ ಹೊಂದಿರುತ್ತದೆ. ಕನಸಿನಲ್ಲಿ ಕೆಲವು ವಿಷಯ ಕಾಣಿಸಿದ್ರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಕನಸು ವಿಜ್ಞಾನದ ಪ್ರಕಾರ, ಅಳುವ ವ್ಯಕ್ತಿ, ಮುಳ್ಳಿನ ಸಸ್ಯಗಳು, ಮಾಂಸ ತಿನ್ನುವುದು ಅಥವಾ ಮಾಂಸ ಮಾರಾಟ ಮಾಡುವುದು ಕಂಡರೆ ಅದನ್ನು ಅಶುಭವೆಂದು ನಂಬಲಾಗುತ್ತದೆ. ಇದು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಘಟನೆಯ ಸೂಚನೆ ನೀಡುತ್ತದೆ.
ಜೇನುನೊಣ ಅಥವಾ ಯಾವುದೇ ಪ್ರಾಣಿ ಅಥವಾ ಪಕ್ಷಿ ನಿಮ್ಮನ್ನು ಕಚ್ಚಿದಂತೆ ಕಂಡ್ರೆ ಅದು ಒಳ್ಳೆಯದಲ್ಲ. ಕೊಳಕು ನೀರು ಅಥವಾ ಕೆಸರಿನಲ್ಲಿ ಹಾರುವುದು, ಬೆಂಕಿ ಕಾಣಿಸಿಕೊಳ್ಳುವುದು ಕೂಡ ಸೂಕ್ತವಲ್ಲ.
ಸ್ವಪ್ನದಲ್ಲಿ ನೀವು ಬೆತ್ತಲಾಗಿರುವಂತೆ ಕಂಡ್ರೂ ನೀವು ಜಾಗರೂಕರಾಗಿರಬೇಕು. ಜೂನ್ 11 ರವರೆಗೆ ನಿಮಗೆ ಇಂಥ ಕನಸುಗಳು ಬಿದ್ರೆ ಮುಂದಿನ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಗಂಭೀರವಾದ ಘಟನೆ ಸಂಭವಿಸಲಿದೆ ಎಂಬ ಸೂಚನೆಯಾಗಿದೆ. ಗಂಭೀರ ತೊಂದರೆಯಲ್ಲಿ ಸಿಲುಕಿರಬಹುದು. ಅನಾರೋಗ್ಯಕ್ಕೆ ಒಳಗಾಗಬಹುದು.
ಮೃತ್ಯು ಪಂಚಕದ ಐದು ದಿನ ಯಾವುದೇ ಶುಭ ಸಮಾರಂಭವನ್ನು ಮಾಡಬೇಡಿ. ಯಾವುದೇ ಶುಭ ಸಮಾರಂಭದಲ್ಲಿ ಭಾಗವಹಿಸಬೇಡಿ.ವಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಮರ ಕಡಿಯುವು ಕೆಲಸ ಮಾಡಬೇಡಿ. ಮರಕ್ಕೆ ಸಂಬಂಧಿಸಿದ ಯಾವುದೇ ವಸ್ತುವನ್ನು ಖರೀದಿ ಮಾಡಬೇಡಿ. ದಕ್ಷಿಣದ ಕಡೆಗೆ ಪ್ರಯಾಣಿಸುವುದನ್ನು ತಪ್ಪಿಸಿ. ಹಣಕಾಸಿನ ವಹಿವಾಟುಗಳನ್ನು ಕಡಿಮೆ ಮಾಡಿ.ಹೊಸ ವಸ್ತುಗಳು ಅದರಲ್ಲೂ ದುಬಾರಿ ವಸ್ತುಗಳನ್ನು ಖರೀದಿ ಮಾಡಬೇಡಿ.