newsics.com/ನ್ಯೂಸಿಕ್ಸ್
2026ನೇ ವರ್ಷಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಸುಮಿತಾಚಾರ್ಯ ನೀಡಿರುವ ಭವಿಷ್ಯವಾಣಿ ಭಾರೀ ಚರ್ಚೆಗೆ ಕಾರಣವಾಗಿವೆ.
ಜ್ಯೋತಿಷಿಯ ಪ್ರಕಾರ, 2026ರ ಜೂನ್ 16ರಿಂದ ಜುಲೈ 14ರವರೆಗೆ ವಿಮಾನ ಪ್ರಯಾಣ ಅತ್ಯಂತ ಅಪಾಯಕಾರಿಯಾಗಿರಬಹುದು. ಈ ಅವಧಿಯಲ್ಲಿ ವಿಮಾನ ದುರಂತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದು, ಜನರು ತಮ್ಮ ವಿಮಾನ ಟಿಕೆಟ್ಗಳನ್ನು ರದ್ದುಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಇದೇ ಅವಧಿಯಲ್ಲಿ ಭಾರತದ ಒಬ್ಬ ಪ್ರಭಾವಿ ರಾಜಕೀಯ ನಾಯಕನ ಹತ್ಯೆ ಅಥವಾ ಅನುಮಾನಾಸ್ಪದ ಸಾವಿನ ಸಾಧ್ಯತೆ ಇದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಈ ಘಟನೆಯ ನಂತರ ದೇಶದಲ್ಲಿ ಪ್ರತಿಭಟನೆಗಳು ಹಾಗೂ ರಾಜಕೀಯ ಅಸ್ಥಿರತೆ ಹೆಚ್ಚಾಗಬಹುದು ಎಂದು ಹೇಳಿದ್ದಾರೆ.
ಜುಲೈ 15ರಿಂದ ಆಗಸ್ಟ್ 12ರವರೆಗೆ ಈಶಾನ್ಯ ಭಾರತ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಲ್ಲಿ ಜನಾಂದೋಲನ, ಹಿಂಸಾಚಾರ ಮತ್ತು ಪ್ರತಿಭಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಭಾರತದ ಕೆಲವು ಅಂತರರಾಷ್ಟ್ರೀಯ ಸಂಬಂಧಗಳ ಮೇಲೂ ಈ ಅವಧಿಯಲ್ಲಿ ಪರಿಣಾಮ ಬೀಳಬಹುದು ಎನ್ನಲಾಗಿದೆ.
ಆಗಸ್ಟ್ 13ರಿಂದ ಸೆಪ್ಟೆಂಬರ್ 11ರ ನಡುವೆ ವಿಶ್ವಮಟ್ಟದ ಸಂಘರ್ಷಕ್ಕೆ ಕಾರಣವಾಗುವ ಬೆಳವಣಿಗೆಗಳು ನಡೆಯಬಹುದು ಎಂದು ಸುಮಿತಾಚಾರ್ಯ ಹೇಳಿದ್ದಾರೆ. ಯುರೋಪ್ ಕೇಂದ್ರವಾಗಿಸಿಕೊಂಡು ಬಹುರಾಷ್ಟ್ರೀಯ ಯುದ್ಧದ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ.
ಇದೇ ಸಮಯದಲ್ಲಿ ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ, ಬ್ಯಾಂಕಿಂಗ್ ಕ್ಷೇತ್ರಕ್ಕೆ ನಷ್ಟ, ಜಮ್ಮು-ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದಾಗ್ಯೂ, ಈ ಎಲ್ಲಾ ಹೇಳಿಕೆಗಳು ಜ್ಯೋತಿಷ್ಯ ಲೆಕ್ಕಾಚಾರಗಳ ಆಧಾರದ ಮೇಲೆ ನೀಡಲಾದ ಭವಿಷ್ಯವಾಣಿಗಳಾಗಿದ್ದು, ಇವುಗಳಿಗೆ ಯಾವುದೇ ಅಧಿಕೃತ ಅಥವಾ ವೈಜ್ಞಾನಿಕ ದೃಢೀಕರಣವಿಲ್ಲ. ಭವಿಷ್ಯದಲ್ಲಿ ಇವು ನಿಜವಾಗುತ್ತವೆಯೇ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.
ಪ್ರಮಾಣವಚನಕ್ಕೂ ಮುನ್ನ ಅಜ್ಜಯ್ಯನ ಆಶೀರ್ವಾದ ಪಡೆದ ಡಿಕೆಶಿ :ತಡರಾತ್ರಿ 2 ಗಂಟೆಯವರೆಗೆ ಸುದೀರ್ಘ ಪ್ರಾರ್ಥನೆ