newsics.com/ನ್ಯೂಸಿಕ್ಸ್
ಬೆಂಗಳೂರು : ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪದಗ್ರಹಣ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆಸಲಾಗಿದೆ. ನಿನ್ನೆ ರಾತ್ರಿ ದೆಹಲಿಯಿಂದ ರಾಜ್ಯಕ್ಕೆ ಬಂದ ಡಿಕೆ ಶಿವಕುಮಾರ್ ಅವ್ರು ನಾಗರಬಾವಿಅಜ್ಜಯ್ಯನ ಶಾಖಾ ಮಠಕ್ಕೆ ಡಿಕೆ ಶಿವಕುಮಾರ್ ಭೇಟಿಯಾಗಿದ್ರು. ತಡರಾತ್ರಿವರೆಗೂ ಡಿಕೆಶಿ ಅಜ್ಜಯ್ಯನ ಜೊತೆ ಚರ್ಚೆ ನಡೆಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಅಜ್ಜಯ್ಯನವರ ಪರಮ ಭಕ್ತರಾಗಿದ್ದು, ಅವರ ಅಪ್ಪಣೆ ಇಲ್ಲದೆ ರಾಜಕೀಯದ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎಂಬುದನ್ನು ಈ ಹಿಂದೆಯೇ ಹಲವು ಬಾರಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಈ ಹಿಂದೆ ದೆಹಲಿಗೆ ಪ್ರಮುಖ ಸಭೆಗೆ ತೆರಳುವ ಮುನ್ನವೂ ಒಂದೇ ದಿನದಲ್ಲಿ ಎರಡು ಬಾರಿ ನೊಣವಿನಕೆರೆಯ ಮಠಕ್ಕೆ ಭೇಟಿ ನೀಡಿ ಅಜ್ಜಯ್ಯನ ದರ್ಶನ ಪಡೆದಿದ್ದರು.
ಅಜ್ಜಯ್ಯನವರ ಶಾಖಾ ಮಠಕ್ಕೆ ಧಾವಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದಂತೆ ಡಿಕೆ ಶಿವಕುಮಾರ್ ಅವ್ರು ತಡರಾತ್ರಿಯೇ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ರು. ಅಜ್ಜಯ್ಯನ ಅರ್ಶಿವಾದ ಪಡೆಯಲು ಪತ್ನಿ ಸಮೇತ ಆಗಮಿಸಿದ್ರು. ರಾತ್ರಿ 11.40 ರಿಂದ 2 ಗಂಟೆ ತನಕ ಶಾಖಾ ಮಠದಲ್ಲಿದ್ದ ಡಿಕೆಶಿ ಇದ್ದರು.
ಬೆಂಗಳೂರಿನ ನಾಗರಬಾವಿಯಲ್ಲಿರೋ ಅಜ್ಜಯ್ಯನ ಶಾಖಾ ಮಠಕ್ಕೆ ಬಂದ ಡಿಕೆ ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ಶಾಖಾ ಮಠಕ್ಕೆ ಆಗಮಿಸಿದ್ರು. ಎರಡು ಗಂಟೆಗಳ 20 ನಿಮಿಷಗಳ ಕಾಲ ಅಜ್ಜಯ್ಯರ ಜೊತೆ ಸುದೀರ್ಘ ಚರ್ಚೆ ಮಾಡಿದ್ದು, ಸಿಎಂ ಪದಗ್ರಹಣ, ಸಂಪುಟ ರಚನೆ ಕುರಿತು ಹೈಕಮಾಂಡ್ ಜೊತೆಗಿನ ಚರ್ಚೆ ಬಗ್ಗೆ ಡಿಕೆಶಿ ಮಾತಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ತಮ್ಮನ್ನು ಹುಡುಕಿಕೊಂಡು ಬಂದ ಡಿ.ಕೆ.ಶಿವಕುಮಾರ್ ಅವರಿಗೆ ಅಜ್ಜಯ್ಯನವರು ಕೆಲವು ಪ್ರಮುಖ ರಾಜಕೀಯ ಸಲಹೆಗಳ ಜೊತೆಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ ಎನ್ನಲಾಗಿದೆ. “ಅಧಿಕಾರ ಸಿಕ್ಕ ತಕ್ಷಣ ದೊಡ್ಡ ಮಟ್ಟದ ಆರ್ಭಟ ಅಥವಾ ಸಂಭ್ರಮಾಚರಣೆ ಬೇಡ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಹತ್ತೆಂಟು ಬಾರಿ ಯೋಚಿಸಿ ತೀರ್ಮಾನಿಸಿ. ಪ್ರಕೃತಿಯ ಮಳೆಗೆ ಪರಿಹಾರ ಕಂಡುಕೊಳ್ಳಬಹುದು, ಆದರೆ ರಾಜಕಾರಣದ ಸಮಯ ಮತ್ತು ಸಂದರ್ಭದ ತೀರ್ಮಾನಗಳು ಸಂಪೂರ್ಣ ನಿಮ್ಮ ಕೈಯಲ್ಲೇ ಇವೆ” ಎಂದು ಅಜ್ಜಯ್ಯ ಎಚ್ಚರಿಸಿದ್ದಾರೆ ಎನ್ನಲಾಗಿದೆ.
DK Shivakumar Oath ಇಂದು ಡಿಕೆಶಿ ಪಟ್ಟಾಭಿಷೇಕ : ಲೋಕಭವನದ ಸುತ್ತ 2,000 ಪೊಲೀಸರಿಂದ ಬಿಗಿ ಬಂದೋಬಸ್ತ್