Landslide ನಿರಂತರ ಮಳೆಗೆ ಭೀಕರ ಭೂಕುಸಿತ, ಇಬ್ಬರು ಕಾರ್ಮಿಕರು ಸಾ*ವು, ಹಲವರು ನಾಪತ್ತೆ

newsics.com | ನ್ಯೂಸಿಕ್ಸ್ ಇಟಾನಗರ್‌: ಅರುಣಾಚಲ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಲೋಹಿತ್ ಜಿಲ್ಲೆಯ ಶಿವಾಜಿ ನಗರದಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಇಬ್ಬರು ವಲಸೆ ಕಾರ್ಮಿಕರು ಬಲಿಯಾಗಿದ್ದಾರೆ. ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಮಣ್ಣು ಕುಸಿದು ಬಿದ್ದ ಪರಿಣಾಮ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಇನ್ನು ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಆತಂಕ ಎದುರಾಗಿದೆ. ದುರಂತಕ್ಕೆ ಈಡಾದವರೆಲ್ಲರೂ ಸ್ಥಳೀಯ ನಿರ್ಮಾಣ ಕಾಮಗಾರಿಯೊಂದರಲ್ಲಿ ತೊಡಗಿದ್ದ ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದೆ. ಭೂಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) … Continue reading Landslide ನಿರಂತರ ಮಳೆಗೆ ಭೀಕರ ಭೂಕುಸಿತ, ಇಬ್ಬರು ಕಾರ್ಮಿಕರು ಸಾ*ವು, ಹಲವರು ನಾಪತ್ತೆ