newsics.com/ನ್ಯೂಸಿಕ್ಸ್
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದ್ದು, ಬೆಂಗಳೂರು ಅಭಿವೃದ್ಧಿ ಖಾತೆ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಅಸಮಾಧಾನ ಈಗ ದೆಹಲಿ ಅಂಗಳ ತಲುಪಿದೆ. ರಾಮಲಿಂಗಾ ರೆಡ್ಡಿ, ಕೆಎಚ್ ಮುನಿಯಪ್ಪ ಬಳಿಕ ಖಾತೆ ವಿಚಾರವಾಗಿ ಕೃಷ್ಣಭೈರೇಗೌಡ ಕ್ಯಾತೆ ತೆಗೆದಿದ್ದರು.
ನಗರಾಭಿವೃದ್ಧಿ ಇಲಾಖೆ ನೀಡಿಯೂ ಕೃಷ್ಣಭೈರೇಗೌಡ ಅಸಮಾಧಾನಗೊಂಡಿದ್ದಾರೆ. ತಮ್ಮ ಇಲಾಖೆಯಲ್ಲಿ ಬಿಡಿಎ ಮತ್ತು ಬೆಂಗಳೂರು ಪ್ರದೇಶಾಭಿವೃದ್ಧಿ ಇಲಾಖೆ ಸೇರಿಸಿಲ್ಲ ಎನ್ನುವುದು ಕೃಷ್ಣಭೈರೇಗೌಡರ ಅಸಮಾಧಾನ. ಇದು ಸಿಎಂ ಡಿಕೆ ಶಿವಕುಮಾರ್ ಗೆ ಸದ್ಯಕ್ಕೆ ಹೊಸ ತಲೆನೋವು. ಆದರೆ ಖಾತೆ ಹಂಚಿಕೆ ವಿಚಾರದಲ್ಲಿ ಎಲ್ಲವೂ ಹೈಕಮಾಂಡ್ ನದ್ದೇ ಅಂತಿಮ ತೀರ್ಮಾನ.
ಹೀಗಾಗಿ ಈಗ ತಮ್ಮ ಖಾತೆಗೆ ತಾವು ಸೂಚಿಸಿದ ಈ ಎರಡು ಇಲಾಖೆ ಸೇರಿಸಲು ಕೃಷ್ಣಭೈರೇಗೌಡ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.