newsics.com/ನ್ಯೂಸಿಕ್ಸ್
ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವಕ್ಷೇತ್ರವಾದ ಕನಕಪುರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಡೆದ ಬೃಹತ್ ರೋಡ್ ಶೋನಲ್ಲಿ ಜನರು ಅಪಾರ ಪ್ರಮಾಣದ ಸೇಬಿನ ಹಾರಗಳನ್ನು ಹಾಕಿ ಭರ್ಜರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ವಾಹನದ ಮೇಲೆ ನಿಂತಿದ್ದರು. ಅವರ ಪಕ್ಕದಲ್ಲೇ ನಿಂತಿದ್ದ ಕಾರ್ಯಕರ್ತರೊಬ್ಬರು ಅವರಿಗೆ ಸೇಬು ಹಣ್ಣು ಕಿತ್ತು ಕೊಟ್ಟರು, ಅವರು ಅದನ್ನು ಸ್ವಲ್ಪ ಕಚ್ಚಿ, ನೆರೆದಿದ್ದ ಜನರತ್ತ ಬಿಸಾಡಿದರು.

ಮಿಸ್ಟರ್ ಸಿಎಂ ಡಿಕೆ ಶಿವಕುಮಾರ್ ಅವರೇ ನೀವೇನು ರಾಜನಾಗಿದ್ದೀರಾ?, ಯಾರಾದರೂ ಬೇರೆಯವರು ಕಚ್ಚಿದ ಸೇಬನ್ನು ನೀವು ತಿನ್ನುತ್ತೀರಾ?. ನೀವು ಶಬರಿಯಲ್ಲ. ನಿಮ್ಮನ್ನು ಕರ್ನಾಟಕದ ಜನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಮೋದಿಗೆ ನೀವು ಸದಾ ದೇಶದ ಸೇವಕನಿದ್ದಂತೆ. ರಾಜಕೀಯದಲ್ಲಿ ಇರುವ ಪ್ರತಿಯೊಬ್ಬರಿಗೂ ಇಂತಹದ್ದೇ ಸೇವಾ ಮನೋಭಾವ ಇರಬೇಕು. ಶಬರಿ ತನ್ನ ರಾಮನಿಗೆ ಭಕ್ತಿಯಿಂದ ಕಚ್ಚಿದ ಹಣ್ಣನ್ನು ನೀಡುತ್ತಾಳೆ. ಆದರೆ ಡಿಕೆ ಶಿವಕುಮಾರ್ ಅವರೇ ನೀವು ಮಾಡುತ್ತಿರುವುದು ರಾಜ ಮಹಾರಾಜರ ತರಹದ ನಡವಳಿಕೆ ‘ಎಂದು ಕೆಂಡಕಾರಿದ್ದಾರೆ.