newsics.com/ನ್ಯೂಸಿಕ್ಸ್
ಕನ್ನಡದ 600ಕ್ಕೂ ಅಧಿಕ ಸಿನಿಮಾ, ಧಾರಾವಾಹಿಗಳಲ್ಲಿ ನಟಿ ಎಂ ಎನ್ ಲಕ್ಷ್ಮೀದೇವಿ ಬಣ್ಣ ಹಚ್ಚಿದ್ದಾರೆ. ಭಕ್ತ ಕನಕದಾಸ, ಬಂಗಾರದ ಮನುಷ್ಯ, ವೀರ ಕೇಸರಿ ಸಿನಿಮಾಗಳು ಲಕ್ಷ್ಮೀದೇವಿ ಅವರಿಗೆ ಹೆಸರು ತಂದುಕೊಟ್ಟಿವೆ. ಲಕ್ಷ್ಮೀ ದೇವಿ ಅವರು ಚಿತ್ರರಂಗಕ್ಕೆ ಬಂದ ಕಾಲವೇ ಬೇರೆ. ರಾಜಕುಮಾರ್, ವಿಷ್ಣುವರ್ಧನ್ ಅವರ ಕಾಲದಿಂದಲೂ ನಟಿಸುತ್ತಾ ಬಂದವರು.
https://youtube.com/shorts/A7gPa–K6QY?si=UClQxtCV5fiwGWUd
ಈ ವಯಸ್ಸಿನಲ್ಲಿ ಮನುಷ್ಯನಿಗೆ ದೇಹ ಸಾಥ್ ಕೊಡುವುದಿಲ್ಲ. ಬಿಪಿ, ಶುಗರ್ ಸೇರಿದಂತೆ ವಯೋಸಹಜ ಕಾಯಿಲೆಗಳು ಕಾಡುವುದು ಸಹಜ. ಈ ಹಿರಿಯ ನಟಿಗೂ ಅಷ್ಟೇ, ಅವರ ತಿಂಗಳ ಔಷಧಿ ಖರ್ಚುಗಳೇ ಸಾವಿರಾರು ರೂಪಾಯಿ ಆಗುತ್ತವೆ. ತಮ್ಮ ಸ್ವಂತ ಕಾಲ ಮೇಲೆ ನಿಲ್ಲಬೇಕು, ಯಾರ ಮುಂದೆಯೂ ಕೈ ಚಾಚಬಾರದು ಎಂಬ ಸ್ವಾಭಿಮಾನ ಇವರದ್ದು.
ಹೀಗಾಗಿಯೇ, ತನ್ನ ಮೆಡಿಸಿನ್ ಖರ್ಚುಗಳನ್ನು ನಿಭಾಯಿಸಲು ಅವರು ಈಗಲೂ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನನಗೆ ಸಣ್ಣ ಪಾತ್ರ ಸಿಕ್ಕರೂ ಪರವಾಗಿಲ್ಲ, ಕೆಲಸ ಮಾಡಿ ಹಣ ಸಂಪಾದಿಸುತ್ತೇನೆ ಎಂದು ಅವರು ಹೇಳುವ ಮಾತುಗಳು ಕೇಳಿದರೆ ಎಂತಹವರ ಕಣ್ಣಲ್ಲೂ ನೀರು ಬರುತ್ತದೆ.
ಸಾಮಾನ್ಯವಾಗಿ ಕಲಾವಿದರು ಅಂದ ತಕ್ಷಣ ನಾವು ಅವರ ಬಳಿ ಕೋಟಿ ಕೋಟಿ ಹಣ ಇರುತ್ತದೆ ಎಂದು ಭಾವಿಸುತ್ತೇವೆ. ಆದರೆ ಸಣ್ಣ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಪೋಷಕ ಕಲಾವಿದರ ಸ್ಥಿತಿ ಹಾಗಿರುವುದಿಲ್ಲ. ಲಕ್ಷ್ಮೀ ದೇವಿ ಅವರು ಕೂಡಾ ಕಷ್ಟದ ದಿನಗಳನ್ನು ನೋಡುತ್ತಿದ್ದಾರೆ. ಯಾರಾದರೂ ಸಿನಿಮಾ ಅವಕಾಶ ಕೊಟ್ಟರೆ ಖುಷಿಯಿಂದ ಹೋಗಿ ನಟಿಸುತ್ತಾರೆ. ಸೆಟ್ನಲ್ಲಿ ಎಷ್ಟೇ ಹೊತ್ತಾದರೂ ತಾಳ್ಮೆಯಿಂದ ಕುಳಿತು ತಮ್ಮ ಕೆಲಸ ಮುಗಿಸಿಕೊಡುತ್ತಾರೆ. ಅವರ ಈ ಶಿಸ್ತು ಮತ್ತು ಬದ್ಧತೆ ಇಂದಿನ ಯುವ ನಟರಿಗೆ ಪಾಠವಾಗಬೇಕು.
ಸಿನಿಮಾ ಸಂಘ ಸಂಸ್ಥೆಗಳು ಮತ್ತು ಸರ್ಕಾರ ಇಂತಹ ಹಿರಿಯ ಕಲಾವಿದರತ್ತ ಗಮನ ಹರಿಸಬೇಕು ಎಂಬುದು ಅಭಿಮಾನಿಗಳ ಆಶಯ. ಎಷ್ಟೋ ಕಲಾವಿದರು ಕೊನೆಯ ದಿನಗಳಲ್ಲಿ ಹಣವಿಲ್ಲದೆ ಪರದಾಡಿ ಹೋದ ಇತಿಹಾಸ ನಮ್ಮ ಕಣ್ಣಮುಂದಿದೆ. ಅಂತಹ ಸ್ಥಿತಿ ಲಕ್ಷ್ಮೀ ದೇವಿ ಅವರಂತಹ ಪ್ರತಿಭಾವಂತ ಕಲಾವಿದರಿಗೆ ಬರಬಾರದು.