https://youtube.com/shorts/7P5j592ICRU?si=brWLJ4hEetaflYiu
newsics.com
ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ನಡೆದ ಮಹಾತ್ಮಾ ಬಸವೇಶ್ವರ ಜಾತ್ರಾ ರಥೋತ್ಸವದಲ್ಲಿ ವೇಳೆ ಚಕ್ರಕ್ಕೆ ಸಿಲುಕಿ ಮೂವರಿಗೆ ಗಂಭೀರ ಗಾಯಗಳಾಗಿದೆ. ಬಸವಕಲ್ಯಾಣ ನಗರದ ಥೇರ್ ಮೈದಾನದಲ್ಲಿ ಇಂದು ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ.
ಬಸವಭಕ್ತರು ಉತ್ಸಾಹದಿಂದ ಮಹಾತ್ಮಾ ಬಸವೇಶ್ವರರ ರಥವನ್ನು ಎಳೆಯಲು ಮುಂದಾಗಿದ್ದರು. ಭಕ್ತಿಯಿಂದ ತುಂಬಿದ ವಾತಾವರಣದಲ್ಲಿ ಹೆಚ್ಚಿನ ಜನರು ರಥ ಹಗ್ಗ ಹಿಡಿದು ಎಳೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ.
ರಥೋತ್ಸವದ ವೇಳೆ ಏಕಾಏಕಿ ಜನರ ನಡುವೆ ನುಕಾಟ-ತಳ್ಳಾಟ ಆರಂಭವಾಗಿದೆ. ಜನಸಮೂಹದ ಒತ್ತಡ ಹೆಚ್ಚಾದ ಕಾರಣ ರಥದ ನಿಯಂತ್ರಣ ತಪ್ಪಿ ಹಠಾತ್ ಮುಂದೆ ಜೋರಾಗಿ ಸಾಗಿದ್ದು, ಕೆಲವರು ರಥದ ಚಕ್ರದ ಕೆಳಗೆ ಸಿಲುಕಿದ್ದಾರೆ. ಇದರಿಂದ ಈ ಭೀಕರ ಅವಘಡ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಧನರಾಜ್ ಎಂಬುವರಿಗೆ ಅತ್ಯಂತ ಗಂಭೀರ ಗಾಯವಾಗಿದ್ದು, ಅವರ 2 ಕಾಲುಗಳು ಕಟ್ ಆಗಿದೆ. ರಿಶಬ್ ಎಂಬ ಯುವಕನ 2 ಕಾಲುಗಳಿಗೂ ತೀವ್ರ ಗಾಯಗಳಾಗಿವೆ. ಮತ್ತೊಬ್ಬ ಭೀಮಾಶಂಕರ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳು ಆಗಿವೆ ಎಂದು ತಿಳಿದುಬಂದಿದೆ.
ಘಟನೆಯ ನಂತರ ಸ್ಥಳದಲ್ಲಿದ್ದ ಜನರು ತಕ್ಷಣ ಗಾಯಾಳುಗಳನ್ನು ಸುರಕ್ಷಿತ ಸ್ಥಳಕ್ಕೆ ಸರಿಸಿ, ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರು. ಧನರಾಜ್, ರಿಶಬ್ ಹಾಗೂ ಭೀಮಾಶಂಕರ್ರನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
https://www.newsics.com/2026/04/23/sex-on-a-plane-airlines-ban-couple-for-life/