newsics.com
ಎರಡನೇ ಮದುವೆಗಾಗಿ ಹಾಸಮಣೆ ಏರಬೇಕಿದ್ದ ವರ ಇಂದು ಅನಾಥ ಶವವಾಗಿ ಬಿದ್ದಿದ್ದಾರೆ. ಆರು ತಿಂಗಳ ಹಿಂದಷ್ಟೆ ಪತ್ನಿಯ ಸಾವು ಸಂಭವಿಸಿತ್ತು. ಈ ಹಿನ್ನೆಲೆಯಲ್ಲೇ ಎರಡನೇ ಮದುವೆಗೆ ತಯಾರಾಗಿದ್ದ ವೈದ್ಯ ಹತ್ಯೆಯಾದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೆ.ಹೆಚ್.ಬಿ. ಕಾಲೋನಿ ಬಳಿ ಘಟನೆ ನಡೆದಿದೆ. ಡಾ. ರಮೇಶ್ ಕಲಗುಟಕರ(51) ಕೊಲೆಯಾದವರು. 8 ತಿಂಗಳ ಹಿಂದೆ ಅವರ ಪತ್ನಿ ಮೃತಪಟ್ಟಿದ್ದು, ಇಬ್ಬರು ಮಕ್ಕಳಿದ್ದಾರೆ. ಒಬ್ಬರು ವೈದ್ಯರಾಗಿದ್ದರೆ, ಮತ್ತೊಬ್ಬರು ಎಂಜಿನಿಯರಿಂಗ್ ಓದುತ್ತಿದ್ದಾರೆ. ಮನೆಯಲ್ಲಿ ವಾಸವಾಗಿದ್ದ ರಮೇಶ್ ಪತ್ನಿಯ ಸಹೋದರಿಯನ್ನು ಏಪ್ರಿಲ್ 20ರಂದು ಸೋಮವಾರ ಮದುವೆಯಾಗಬೇಕಿತ್ತು.
ಕೊಲೆಯಾದ ರಮೇಶ ಈ ಹಿಂದೆ ತಮ್ಮ ಪತ್ನಿಯ ಸಾವನ್ನು ಕಂಡು, ಇದೀಗ ಎರಡನೇ ಮದುವೆಗೆ ಸಜ್ಜಾಗಿದ್ದರು. ಆದರೆ ವಿಧಿಯ ಆಟ ಯಾರು ಬಲ್ಲವರು ಎಂಬಂತೆ ಯಮನ ಕುನಿಕೆಗೆ ಆಹಾರವಾಗಿದ್ದಾರೆ. ಅಲ್ಲದೇ ಅವರ ನಿರ್ಧಾರವೇ ಅವರನ್ನು ತಿಂದಿತಾ? ಎನ್ನುವ ಪ್ರಶ್ನೆ ಹಾಗೂ ಗಾಢ ಅನುಮಾನ ಹೊಗೆ ಆಡುತ್ತಿರುವುದಂತು ಸತ್ಯ ಎನ್ನಲಾಗಿದೆ. ಅಂದರೆ ಅವರು ತೆಗೆದುಕೊಂಡ ಇನ್ನೊಂದು ಮದುವೆ ನಿರ್ಧಾರವೇ ಆ ಕೊಲೆಗೆ ಕಾರಣವಾಯ್ತಾ ಎಂಬ ಶಂಕೆಯೂ ಇದೆ ಎನ್ನುವುದು ತಿಳಿದು ಬಂದಿದೆ.
ಅಲ್ಲದೇ ನಾಳೆಯೆ ಮತ್ತೊಂದು ಹಂತದ ಹೊಸ ಜೀವನಕ್ಕೆ ಕಾಲುಡಿತ್ತಿರುವ ಮನುಷ್ಯ ಇಂದೇ ಅಂತ್ಯ ಕಂಡಿರುವುದು ದುರಂತದಂತೆ ಕಾಣಿಸಿಕೊಂಡಿದೆ. ನಾಳೆ ಶಿರಸಿಯ ದೇವಸ್ಥಾನ ಒಂದರಲ್ಲಿ ರಮೇಶನ ಎರಡನೇ ಮದುವೆ ನಿಗದಿಯಾಗಿತ್ತು. ಮದುವೆಗೂ ಒಂದು ದಿನ ಮೊದಲೆ ವೈದ್ಯನ ಕೊಲೆಯಾಗಿದ್ದು, ಹಲವು ಅನುಮಾನಗಳಿಗೂ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಶಶಿಕಾಂತ್ ಶರ್ಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.newsics.com/2026/04/20/gang-rape-of-girl-two-accused-arrested/