https://youtube.com/shorts/EOt-aJYYg5k?si=DmDCY_9WwqDDfAlH
newsics.com
ಜೀ ಕನ್ನಡ ಮೋಸ್ಟ್ ಪಾಪುಲರ್ ಮ್ಯೂಸಿಕ್ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪ್ಸ್’ ಮತ್ತೆ ಆರಂಭ ಆಗುತ್ತಿದೆ. ವೀಕೆಂಡ್ನಲ್ಲಿಸ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಕಿಕ್ ಕೊಡುವುದಕ್ಕೆ ಸಜ್ಜಾಗಿದೆ. ವಾರಾಂತ್ಯದಲ್ಲಿ ಸಂಗೀತದ ಮಾಯಾಲೋಕವನ್ನು ಸೃಷ್ಟಿಸುವುದಕ್ಕೆ ಸಜ್ಜಾಗಿದೆ. ಮತ್ತೊಂದು ಸೀಸನ್ ಮೂಲಕ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವುದಕ್ಕೆ ಈ ಶೋ ರೆಡಿಯಾಗುತ್ತಿದೆ.
ಸರಿಗಮಪ ಲಿಟಲ್ ಚಾಂಪ್ಸ್’ ಇದೇ ಏಪ್ರಿಲ್ 18 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ. ಈ ಸೀಸನ್ನಲ್ಲಿ ಪುಟ್ಟ ಗಾಯಕರು ತಮ್ಮ ಅಪ್ರತಿಮ ಪ್ರತಿಮ ಪ್ರತಿಭೆಯಿಂದ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಲಿದ್ದಾರೆ. ಸಂಗೀತ, ಮನರಂಜನೆ ಹಾಗೂ ಎಮೋಷನ್ಸ್ ಎಲ್ಲವೂ ಸೇರಿಸಿರುವ ಈ ಕಾರ್ಯಕ್ರಮವನ್ನು ವೀಕೆಂಡ್ನಲ್ಲಿ ಕಣ್ತುಂಬಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. ಉದಯೋನ್ಮುಖ ಗಾಯಕರಿಗೆ ಭವ್ಯ ವೇದಿಕೆಯನ್ನು ಕಲ್ಪಿಸಿಕೊಡುವುದರ ಜೊತೆಗೆ ಸಂಗೀತದ ಸಂಭ್ರಮ ಕೂಡ ನಡೆಯಲಿದೆ.
ಈ ಬಾರಿಯೂ ಸರಿಗಮಪ ವೇದಿಕೆಯ ಸೊಗಸನ್ನು ಹೆಚ್ಚಿಸಲು ಕನ್ನಡಿಗರ ನೆಚ್ಚಿನ ‘ತ್ರಿಮೂರ್ತಿ’ ತೀರ್ಪುಗಾರರು ಸಜ್ಜಾಗಿದ್ದಾರೆ. ಮಧುರ ಗಾಯನಕ್ಕೆ ಹೆಸರಾದ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಸ್ವರ ಮಾಂತ್ರಿಕ ವಿಜಯ್ ಪ್ರಕಾಶ್ ಅವರು ಪುಟಾಣಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಇನ್ನು ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮ ಅದ್ಭುತ ಮಾತುಗಳು ಮತ್ತು ಲವಲವಿಕೆಯ ನಿರೂಪಣೆಯ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ. ತೀರ್ಪುಗಾರರ ತಾಂತ್ರಿಕ ಸಲಹೆಗಳು ಮತ್ತು ಅನುಶ್ರೀ ಅವರ ಪ್ರೋತ್ಸಾಹದ ಮಾತುಗಳು ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದು ಗ್ಯಾರಂಟಿ ಎನ್ನಲಾಗಿದೆ.
https://www.newsics.com/2026/04/16/which-tea-is-best-for-melting-belly-fat-like-butter/