https://youtube.com/shorts/mbdlQ4YCz3Y?si=RXILmDB-TWH7l87U
newsics.com
ಸುಡುವ ಬಿಸಿಲಿನಿಂದ ಹೈರಾಣಾಗಿರುವ ಜನರಿಗೆ ಈಗ ಹವಾಮಾನ ಇಲಾಖೆ ಒಂದು ಸಿಹಿ ಸುದ್ದಿಯನ್ನು ನೀಡಿದೆ. ರಾಜ್ಯದಾದ್ಯಂತ ಮಳೆಯ ಮುನ್ಸೂಚನೆ ಸಿಕ್ಕಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸದ್ಯ ಬಿಸಿಲಿನ ತಾಪ ಜೋರಾಗಿದ್ದರೂ, ಸಂಜೆ ಮತ್ತು ರಾತ್ರಿಯ ವೇಳೆಗೆ ಮೋಡ ಕವಿದ ವಾತಾವರಣವಿರಲಿದೆ. ಅಥವಾ ಸಂಜೆ ಗುಡುಗು ಸಮೇತ ಮಳೆಯಾಗುವ ಸಾಧ್ಯತೆ ಇದೆ.ಬಳ್ಳಾರಿ ವಿಜಯನಗರ ದಾವಣಗೆರೆ ಹಾವೇರಿ ಯಲ್ಲಿ ಭಾರೀ ಮಳೆ ಗಾಳಿ, ರೈತರಿಗೆ ಆಲಿಕಲ್ಲು ಎಚ್ಚರಿಕೆ ನೀಡಿದೆ.
ಇನ್ನು ಏಪ್ರಿಲ್ 18 ಮತ್ತು 19 ರಿಂದ ಈ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಮಲೆನಾಡಿನ ಭಾಗಗಳಾದ ಕೊಡಗು ಮತ್ತು ಹಾಸನದಲ್ಲಿ ರಾತ್ರಿಯ ವೇಳೆ ತಂಪಾದ ವಾತಾವರಣವಿದ್ದರೆ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಈಗಾಗಲೇ ತುಂತುರು ಮಳೆಯ ಸಿಂಚನವಾಗುವ ಸಾಧ್ಯತೆಯಿದೆ. ಏಪ್ರಿಲ್ 19ರ ನಂತರ ಮಲೆನಾಡು ಸಂಪೂರ್ಣ ತಂಪಾಗಲಿದೆ.
ಉತ್ತರ ಮತ್ತು ದಕ್ಷಿಣ ಒಳನಾಡಿನ ಸ್ಥಿತಿಗತಿ- ಉತ್ತರ ಕರ್ನಾಟಕದ ಬೆಳಗಾವಿ ಮತ್ತು ಧಾರವಾಡದ ಜನರಿಗೆ ಮಳೆಯ ಸಿಹಿ ಸುದ್ದಿ ಸಿಕ್ಕಿದೆ. ಸಂಜೆ ವೇಳೆಗೆ ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದ್ದರೆ, ಏಪ್ರಿಲ್ 20 ರಿಂದ ಈ ಭಾಗದಲ್ಲಿ ಮಳೆ ಚುರುಕುಗೊಳ್ಳಲಿದೆ.
https://www.newsics.com/2026/04/14/pm-modi-trump-hold-important-40-minute-discussion/