ಬೆಂಗಳೂರು: ಸೋಶಿಯಲ್ ಮೀಡಿಯಾ ಬಂದ ಮೇಲೆ ನಿಮಿಷಕ್ಕೊಂದು ಸುದ್ದಿ ಎಂಬಂತೆ ನಾನಾ ರೀತಿಯಲ್ಲಿ ಗಾಸಿಪ್ ಹರಿದಾಡುತ್ತಿರುತ್ತದೆ. ಸೆಲೆಬ್ರಿಟಿಗಳ ಬಗ್ಗೆಯಂತೂ ಸುಳ್ಳೋ, ಸತ್ಯವೋ ಎನ್ನುವುದನ್ನು ಪರಿಶೀಲನೆ ನಡೆಸದೆಯೇ ಸುದ್ದಿಯನ್ನು ಹರಿದು ಬಿಡಲಾಗುತ್ತದೆ.
ಡಿಜಿಟಿಲ್ ಯುಗದಲ್ಲಿ “ಫೇಕ್ ನ್ಯೂಸ್” ಎಂಬುದು ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. ಇಂತಹದ್ದೇ ಒಂದು ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದು, ಈ ಬಗ್ಗೆ ನಟಿಯೇ ಸ್ಪಷ್ಟನೆ ನೀಡಿದ್ದಾರೆ.
ಆನಂದ್'” ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟಿ ಸುಧಾರಾಣಿ ಅವರಿಗೆ ಶಿವರಾಜ್ ಕುವಾರ್ ಕಂಡರೆ ಭಯವಿತ್ತು. ನಂತರ ಅವರ ಮೇಲೆ ಪ್ರೀತಿ ಹುಟ್ಟಿತು ಮತ್ತು ಮದುವೆಯಾಗುವ ಆಸೆಯೂ ಇತ್ತು. ಆದರೆ ಡಾ. ರಾಜ್ಕುಮಾರ್ ಅವರ ಮಗ ಎಂಬ ಕಾರಣದಿಂದ ಅವರು ಇದನ್ನು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ಈ ವಿಷಯವನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಕೂಡ ಉಲ್ಲೇಖ ಮಾಡಲಾಗಿದೆ.
ಅಸಲಿಗೆ ನಟಿ ಸುಧಾರಾಣಿ ಯಾವ ಸಂದರ್ಶನದಲ್ಲಿಯೂ ಈ ಮಾತನ್ನು ಹೇಳಿಲ್ಲ.ಇದನ್ನು ವ್ಯೂವ್ಗೋಸ್ಕರ ಯಾರೋ ಒಬ್ಬರು ಕ್ರಿಯೇಟ್ ಮಾಡಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸುಧಾರಾಣಿ ಅವರ ಕಣ್ಣಿಗೆ ಬಿದ್ದಿದ್ದು, ಹಿರಿಯ ನಟಿ ಗರಂ ಆಗಿದ್ದಾರೆ.
https://www.instagram.com/reel/DWx8QJIElI_/?igsh=ZGlvcXFuY3djcjl4
ಪ್ರಶಾಂತ್ ನೀಲ್ ಹಾಗೂ ಜೂ.ಎನ್ಟಿಆರ್ ಕಾಂಬಿನೇಶನ್ನ ‘ಡ್ರ್ಯಾಗನ್’ ಚಿತ್ರದ ಕತೆ ಲೀಕ್!