https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ದಾಂಡೇಲಿ : ನಗರದ ಸಮೀಪದಲ್ಲಿರುವ ಹಸನ್ಮಾಳದ ಕೆರೆಗೆ ನೀರು ಕುಡಿಯಲೆಂದು ಇಳಿದಿದ್ದ ಜಿಂಕೆಯೊಂದನ್ನು ಕರೆಯಲ್ಲಿದ್ದ ಮೊಸಳೆಯೊಂದು ಹೊತ್ತೊಯ್ದು ಸಾಯಿಸಿದ ಘಟನೆ ಭಾನುವಾರ ನಡೆದಿದೆ.
ಈ ಸಂದರ್ಭದಲ್ಲಿ ಅಲ್ಲೇ ಹತ್ತಿರದಲ್ಲಿದ್ದ ಬಜರಂಗದಳದ ಗೋ ರಕ್ಷಣಾ ತಂಡದವರು ಜಿಂಕೆಯನ್ನು ಮೊಸಳೆಯ ಬಾಯಿಂದ ತಪ್ಪಿಸಲು ಹರಸಾಹಸ ಮಾಡಿದ್ದಾರೆ. ಆದಾಗ್ಯೂ ಪ್ರಯತ್ನ ಫಲ ನೀಡಲಿಲ್ಲ. ಕೊನೆಗೆ ಬಜರಂಗದಳದ ಗೋರಕ್ಷಣ ತಂಡದವರು ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.