Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮುಂದಿನ 2 ವರ್ಷ ಭಾರತದಲ್ಲಿ ಈ ಲೋಹದ ಬೆಲೆ ಡಬಲ್; ಕಾರಣವೇನು?
ಕರ್ನಾಟಕಪ್ರಮುಖ

ಮುಂದಿನ 2 ವರ್ಷ ಭಾರತದಲ್ಲಿ ಈ ಲೋಹದ ಬೆಲೆ ಡಬಲ್; ಕಾರಣವೇನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಮುಂದಿನ 2 ವರ್ಷಗಳಲ್ಲಿ ಭಾರತದಲ್ಲಿ ತಾಮ್ರದ ಬೇಡಿಕೆಯಲ್ಲಿ ಭಾರಿ ಏರಿಕೆಯಾಗಲಿದೆ. ಶೇಕಡಾ 10 ರಿಂದ 12 ರಷ್ಟು ಬೇಡಿಕೆ ಹೆಚ್ಚಾಗಲಿದೆ. ಈ ಪ್ರಮಾಣ ಮತ್ತಷ್ಟು ಏರಿಕೆಯಾದರೂ ಅಚ್ಚರಿ ಇಲ್ಲ ಎಂದು ICRA ವರದಿಯಲ್ಲಿ ಉಲ್ಲೇಖಿಸಿದೆ. ವಿಶೇಷ ಅಂದರೆ ತಾಮ್ರದ ಬೆಲೆ 2025ಕ್ಕೆ ಹೋಲಿಸಿದರೆ 2026ರ ಆರಂಭದಲ್ಲೇ ಶೇಕಡಾ 40ರಷ್ಟು ಏರಿಕೆಯಾಗಿದೆ. 2026ರ ಆರಂಭದಲ್ಲೇ ಟನ್ ತಾಮ್ರಕ್ಕೆ 11.77 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. 2026ರ ಅಂತ್ಯಕ್ಕೆ ಈ ಬೆಲೆ ಶೇಕಡಾ 40 ರಿಂದ ಶೇಕಡಾ 50ರಷ್ಟು ಏರಿಕೆಯಾಗಲಿದೆ. ಮುಂದಿನ 2 ವರ್ಷದಲ್ಲಿ ತಾಮ್ರದ ಬೆಲೆ ದಾಖಲೆ ಬರೆಯಲಿದೆ ಎಂದು ICRA ವರದಿ ಹೇಳಿದೆ.
ತಾಮ್ರದ ಬೆಲೆ ಏರಿಕೆ, ದುಬಾರಿಯಾದರೂ ಭಾರತದಲ್ಲಿ ತಾಮ್ರದ ಬೇಡಿಕೆ ಕಡಿಮೆಯಾಗುವುದಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಪ್ರಮುಖವಾಗಿ ಭಾರತದಲ್ಲಿ ಕ್ಷಿಪ್ರಗತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ನಗರೀಕರಣಗಳಿಂದ ಬೇಡಿಕೆ ದುಪ್ಪಟ್ಟಾಗಲಿದೆ. ಇಷ್ಟೇ ಅಲ್ಲ, ಗ್ರೀನ್ ಎನರ್ಜಿಗೆ ಭಾರತ ಉತ್ತೇಜನ ನೀಡಿದೆ, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಿದೆ. ಇದರಿಂದ ಭಾರತದಲ್ಲಿ ತಾಮ್ರದ ಬೇಡಿಕೆ ಹೆಚ್ಚಾಗುತ್ತಿದೆ. ಇನ್ನು ಸ್ಮಾರ್ಟ್ ಸಿಟಿ ಯೋಜನೆ, ರೈಲ್ವೇ ವಿದ್ಯುದ್ದೀಕರಣ, ರಕ್ಷಣಾ ವಲಯದಲ್ಲೂ ತಾಮ್ರಾದ ಅವಶ್ಯಕತೆ ಹೆಚ್ಚಾಗಿದೆ.ಈ ಕಾರಣಗಳಿಂದ ಭಾರತ ಇತರ ದೇಶಗಳಿಗಿಂತ ಹೆಚ್ಚು ತಾಮ್ರದ ಬಳಕೆ ಮಾಡಲಿದೆ.
ಭಾರತದಲ್ಲಿ ಬೇಡಿಕೆಗೆ ತಕ್ಕಂತೆ ತಾಮ್ರ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಶುದ್ಧೀಕರಿಸಿದ ತಾಮ್ರವನ್ನು ಭಾರತ ಆಮದು ಮಾಡಿಕೊಳ್ಳುವ ಅನಿವಾರ್ಯತೆಯಲ್ಲಿದೆ. ಇದೇ ವೇಳೆ ಕೇಂದ್ರ ಸರ್ಕಾರ ತಾಮ್ರ ಸೇರಿದಂತೆ ಕೆಲ ಲೋಹಗಳ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಭಾರತದಲ್ಲೇ ಉತ್ಪಾದನೆ ಹಾಗೂ ಶುದ್ದೀಕರಣ ಮಾಡಲು ಮುಂದಾಗಿದೆ. ಹೀಗಾಗಿ ಹೊಸ ಕಾರ್ಖಾನೆಗಳ ಸ್ಥಾಪನೆಗೆ ಹೂಡಿಕೆ ಮಾಡಲಾಗಿದೆ. ಈ ಪೈಕಿ ಅದಾನಿ ಗ್ರೂಪ್ ಸ್ಮೆಲ್ಟರ್ ಕಾರ್ಖಾನೆ ಈ ಕೊರತೆ ನೀಗಿಸುವ ಸಾಧ್ಯತೆ ಇದೆ.
ಹೂಡಿಕೆ ದೃಷ್ಟಿಯಿಂದ ಕಾಪರ್ ಮೇಲೆ ಹೂಡಿಕೆ ಉತ್ತಮವಾಗಿದೆ. ಷೇರುಮಾರುಕಟ್ಟೆಯಲ್ಲಿ ತಾಮ್ರ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಹೂಡಿಕೆದಾರರು ಇದೀಗ ICRA ನೀಡಿದ ಸ್ಫೋಟಕ ವರದಿ ಆಧರಿಸಿ ಹೂಡಿಕೆ ಮಾಡುವ ಸಾಧ್ಯತೆ ಇದೆ. ಇದರಿಂದ ತಾಮ್ರ ಭಾರತದಲ್ಲಿ ಮತ್ತಷ್ಟು ಹೊಳೆಯಲಿದೆ ಜೊತೆಗೆ ಬೆಲೆಯೂ ದುಬಾರಿಯಾಗಲಿದೆ.

Suspected terrorist died ಪರಪ್ಪನ ಅಗ್ರಹಾರ ಜೈಲಲ್ಲಿ ಶಂಕಿತ ಉಗ್ರ ಸಾದಿಕ್ ಪಾಷಾ ಸಾ*ವು

TAGGED:The price of this metal will double in India in the next 2 years; what is the reason?
Share This Article
Facebook Twitter Copy Link Print
Previous Article Suspected terrorist died ಪರಪ್ಪನ ಅಗ್ರಹಾರ ಜೈಲಲ್ಲಿ ಶಂಕಿತ ಉಗ್ರ ಸಾದಿಕ್ ಪಾಷಾ ಸಾ*ವು
Next Article ನಾಲ್ವರು ಶಿಕ್ಷಕರಿಂದ ವಿದ್ಯಾರ್ಥಿಗೆ ಹಲ್ಲೆ: ಎಂಟನೇ ತರಗತಿ ಬಾಲಕ ಪ್ರಜ್ಞೆ ಕಳೆದು ಆಸ್ಪತ್ರೆಗೆ ದಾಖಲು

Popular Posts

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

You Might Also Like

ಕರ್ನಾಟಕಪ್ರಮುಖ

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read
ಕರ್ನಾಟಕಪ್ರಮುಖ

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read
ಕರ್ನಾಟಕಪ್ರಮುಖ

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read
ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?