https://youtube.com/shorts/2dkIPQOWaBI?si=yWrxSqwrmu8x_ve-
Subscribe ನ್ಯೂಸಿಕ್ಸ್ ಕನ್ನಡ
newsics.com
ಗೋಕರ್ಣ(ಉತ್ತರ ಕನ್ನಡ): ಇಲ್ಲಿನ ಗಂಗೆಕೊಳ್ಳದಲ್ಲಿರುವ ಅರಣ್ಯ ಇಲಾಖೆಯ ಆಮೆ ಸಂರಕ್ಷಣಾ ಕೇಂದ್ರದಲ್ಲಿ ಕಡಲಾಮೆ ಮೊಟ್ಟೆಯಿಂದ ಹೊರ ಬಂದ ಕಡಲಾಮೆ ಮರಿಗಳನ್ನು ಮಂಗಳವಾರ ಕಡಲಿಗೆ ಸೇರಿಸಲಾಯಿತು.
ಪ್ರತಿ ವರ್ಷ ಡಿಸೆಂಬರ ತಿಂಗಳಿಂದ ಮೇವರೆಗೆ ಕಡಲಾಮೆಯ ಸಂತಾನ್ಪೋತ್ಪತ್ತಿಯ ಸಮಯವಾಗಿದ್ದು ಈ ಭಾಗದ ಕಡಲತೀರದಲ್ಲಿ ಮೊಟ್ಟೆ ಇಟ್ಟು ಮುಚ್ಚಿ ತೆರಳುತ್ತದೆ. ಇದನ್ನು ಅರಣ್ಯ ಇಲಾಖೆ ಗುರುತಿಸಿ ಸಂರಕ್ಷಣೆ ಮಾಡಿ ಮರಿ ಹೊರ ಬಂದ ನಂತರ ಕಡಲಿಗೆ ಸೇರಿಸಲಾಗುತ್ತದೆ.
ಈ ವರ್ಷ ಅರಣ್ಯ ಇಲಾಖೆಯ ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ. ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಗೌಡ, ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ರಾಜು ನಾಯ್ಕ ಮತ್ತು ಸಿಬ್ಬಂದಿ 24 ಗೂಡು ಪತ್ತೆ ಮಾಡಿ 2348 ಮೊಟ್ಟೆಗಳನ್ನ ಸಂರಕ್ಷಿಸಿದ್ದರು. ಪ್ರಥಮ ಗೂಡಿನಿಂದ ಒಟ್ಟು 103 ಮರಿಗಳು ಹೊರಬಂದಿದ್ದು, ಎಲ್ಲಾ ಮರಿಗಳನ್ನು ಸುರಕ್ಷಿತವಾಗಿ ಕಡಲಿಗೆ ಬಿಡಲಾಗಿದೆ.
ಮುದ್ದಿನ ಗಂಡನಿಗಾಗಿ ಇಬ್ಬರು ಹೆಂಡಿರ ಜಗಳ: ಸಮಸ್ಯೆ ಬಗೆಹರಿಸಲು ಊರಿನ ಮುಖಂಡರು ಮಾಡಿದ್ದೇನು?