https://youtube.com/shorts/yWrDals90_k?si=qTyTxtvMLgrsr7gN
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: 2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ನಾಳೆ 2026ರ ಗಣರಾಜ್ಯೋತ್ಸವ. ಇದಕ್ಕೂ ಮುನ್ನ, ಇಂದು (ಭಾನುವಾರ) ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ವಿಶ್ವಸನೀಯ ಮೂಲಗಳ ಪ್ರಕಾರ, ಈ ವರ್ಷದ ಪಟ್ಟಿಯಲ್ಲಿ ಒಟ್ಟು 45 ಗಣ್ಯ ಸಾಧಕರಿದ್ದಾರೆ.
ದಾವಣಗೆರೆ ಹಿಮೋಫಿಲಿಯಾ ಸೊಸೈಟಿಯ ಸ್ಥಾಪಕರಾದ ಸುರೇಶ ಹನಗವಾಡಿ, ಬೆಂಗಳೂರಿನ ಸಮಾಜ ಸೇವಕಿ ಎಸ್.ಜಿ.ಸುಶೀಲಮ್ಮ ಮತ್ತು 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹಕಾರ ಮಂಡ್ಯದ ಪಾಂಡವಪುರ ತಾಲೂಕಿನ ಅಂಕೇಗೌಡ ಅವರು ಕರ್ನಾಟಕದಿಂದ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆಯಾದ ಸಾಧಕರು.
ಈ ವರ್ಷ ಪದ್ಮ ಪ್ರಶಸ್ತಿಗೆ ಭಾಜನರಾದವರ ಪಟ್ಟಿಯಲ್ಲಿ ನಿವೃತ್ತ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಇಂದ್ರಜಿತ್ ಸಿಂಗ್ ಸಿಧು ಸೇರಿದಂತೆ ದಶಕಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಅನೇಕ ಅನಾಮಧೇಯ ಹೀರೋಗಳ ಹೆಸರಿವೆ.
ಪದ್ಮ ಪ್ರಶಸ್ತಿ ಪಡೆದವರ ಪಟ್ಟಿ
ಅಂಕೇಗೌಡ (ಮಂಡ್ಯ)
ಆರ್ಮಿಡಾ ಫರ್ನಾಂಡೆಸ್
ಭಗವಾನದಾಸ್ ರೈಕ್ವಾರ್
ಭಿಕ್ಲ್ಯಾ ಲಡಕ್ಯಾ ಧಿಂಡಾ
ಬೃಜ್ ಲಾಲ್ ಭಟ್
ಬುಧ್ರಿ ತಾತಿ
ಚಾರಣ್ ಹೆಂಬ್ರಮ್
ಚಿರಂಜೀವಿ ಲಾಲ್ ಯಾದವ್
ಧರ್ಮಿಕ್ಲಾಲ್ ಚುನಿಲಾಲ್ ಪಾಂಡ್ಯ
ಗಫ್ರುದ್ದೀನ್ ಮೇವಾತಿ ಜೋಗಿ
ಹ್ಯಾಲಿ ವಾರ್
ಇಂದರ್ಜಿತ್ ಸಿಂಗ್ ಸಿದ್ಧು
ಕೆ. ಪಜನಿವೇಲ್
ಕೈಲಾಸ್ ಚಂದ್ರ ಪಂತ್
ಖೇಮ್ ರಾಜ್ ಸುಂದ್ರಿಯಾಲ್
ಕೊಲ್ಲಕ್ಕಯಿಲ್ ದೇವಕಿ ಅಮ್ಮ ಜಿ
ಕುಮಾರಸ್ವಾಮಿ ತಂಗರಾಜ್
ಮಹೇಂದ್ರ ಕುಮಾರ್ ಮಿಶ್ರಾ
ಮೀರ್ ಹಾಜಿಭಾಯ್ ಕಸಂಭಾಯ್
ಮೋಹನ್ ನಗರ್
ನರೇಶ್ ಚಂದ್ರ ದೇವ್ ವರ್ಮಾ
ನಿಲೇಶ್ ವಿನೋದ್ಚಂದ್ರ ಮಂಡಲೇವಾಲಾ
ನೂರುದ್ದೀನ್ ಅಹ್ಮದ್
ಓಥುವಾರ್ ತಿರುತ್ತನಿ ಸ್ವಾಮಿನಾಥನ್
ಪದ್ಮ ಗುರ್ಮೆಟ್
ಪೊಖಿಲಾ ಲೆಕ್ತೆಪಿ
ಪುನ್ನಿಯಮೂರ್ತಿ ನಟೇಸನ್
ಆರ್. ಕೃಷ್ಣನ್
ರಘುಪತ್ ಸಿಂಗ್
ರಘುವೀರ್ ತುಕಾರಾಮ್ ಖೇಡ್ಕರ್
ರಾಜಸ್ತಾಪತಿ ಕಳಿಯಪ್ಪ ಗೌಂಡರ್
ರಾಮಾ ರೆಡ್ಡಿ ಮಾಮಿಡಿ
ರಾಮಚಂದ್ರ ಗೋಡಬೋಲೆ ಮತ್ತು ಸುನೀತಾ ಗೋಡಬೋಲೆ
ಎಸ್. ಜಿ. ಸುಶೀಲಮ್ಮ(ಬೆಂಗಳೂರು)
ಸಂಗ್ಯುಸಂಗ್ ಎಸ್ ಪೊಂಗೆನರ್
ಶಫಿ ಶೌಕ್
ಶ್ರೀರಂಗ್ ದೇವಬಾ ಲಾಡ್
ಶ್ಯಾಮ್ ಸುಂದರ್
ಸಿಮಂಚಲ್ ಪಾತ್ರೋ
ಸುರೇಶ್ ಹನಗವಾಡಿ(ದಾವಣಗೆರೆ)
ತಾಗಾ ರಾಮ್ ಭೀಲ್
ತೆಚಿ ಗುಬಿನ್
ತಿರುವಾರೂರ್ ಬಕ್ತವತ್ಸಲಂ
ವಿಶ್ವ ಬಂಧು
ಯುಮ್ನಾಂ ಜತ್ರಾ ಸಿಂಗ್.
ನೂರಾರು ಕಾಮುಕರಿಗೆ ಹೆದರುವ ಹೆಂಗಸರ ಪಾಡೇನು?; ನಿರೂಪಕಿ ತಾರೆ ಮಸ್ತಾನಿ ಈ ರೀತಿ ಹೇಳಿದ್ಯಾಕೆ