https://youtube.com/shorts/qpCJajqGxrE?si=vJgoarkrMD0AAjgU
Subscribe ನ್ಯೂಸಿಕ್ಸ್ ಕನ್ನಡ
newsics.com
ನಟಿ ರಾಧಾ ಭಗವತಿ ಅವರು ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಅನುಬಂಧ ಅವಾರ್ಡ್ಸ್ 2025ಕ್ಕೆ ಬಂದಿದ್ದ ನಟಿ ವೇದಿಕೆಯಲ್ಲಿ ಭಾವುಕರಾಗಿದ್ದಾರೆ. ಈ ಹಿಂದೆ ತಮಗೆ ಬಂದ ಕಷ್ಟಗಳನ್ನು ನೆನೆದು ಕಣ್ಣೀರಿಟ್ಟ ನಟಿ ರಾಧಾ ಭಗವತಿ ಅವರು ಸೋಜುಗಾದ ಸೂಜು ಮಲ್ಲಿಗೆ ಹಾಡನ್ನು ಹಾಡುತ್ತಾ, ‘ಗಾಯಕಿ ಆಗಬೇಕೆಂದು ಅಂದುಕೊಂಡವಳು ಚಿತ್ರರಂಗಕ್ಕೆ ಬಂದಿದ್ದು, ಆದರೆ ಕಲಾ ದೇವತೆ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದ್ದಾಳೆ. ಇವತ್ತು ನಿಮ್ಮೆಲ್ಲರ ಮುಂದೆ ಈ ಅವಾರ್ಡ್ ತೆಗೆದುಕೊಂಡಿದ್ದೀನಿ. ಮನೆಯಲ್ಲಿದ್ದ ಕಷ್ಟಗಳನ್ನು ನೋಡುವುದಕ್ಕೆ ಆಗದೇ, ಕೊನೆಯದಾಗಿ ಹೂವನ್ನು ಮಾರಲು ಹೋಗಿದ್ದೆ’ ಎಂದು ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.
ಮಲ್ಲಿ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ರಾಧಾ ಭಗವತಿ ಅವರು ಏಕಾಏಕಿ ಅಮೃತಧಾರೆ ಧಾರಾವಾಹಿಯಿಂದ ಹೊರ ಬಂದಿದ್ದರು. ಆ ಬೆನ್ನಲ್ಲೆ ಭಾರ್ಗವಿ LLB ಧಾರಾವಾಹಿ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ನಟಿ ರಾಧಾ ಭಗವತಿ ಅವರು ಅನುಬಂಧ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
https://www.instagram.com/reel/DT4rlmoDFfa/?igsh=MnJlZDh3ODk1OWhq
ಸರ್ಕಾರಿ ಅಧಿಕಾರಿಗಳು ಇನ್ಮುಂದೆ ಜನಪ್ರತಿನಿಧಿಗಳ ಫೋನ್ ಕಾಲ್ ಸ್ವೀಕರಿಸಲೇಬೇಕು; ರಾಜ್ಯ ಸರ್ಕಾರ ಖಡಕ್ ಆದೇಶ