Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಮನೆಗೆ ಆಯಾ ಸ್ಪರ್ಧಿಗಳ ಫ್ಯಾಮಿಲಿ ಬರ್ತಾನೇ ಇದೆ. ಆದರೆ, ಯಾರೂ ಬಿಗ್ ಬಾಸ್ ಮನೆಯ ಮೂಲಕ ನಿಯಮ ಉಲ್ಲಂಘನೆ ಮಾಡಿರಲಿಲ್ಲ. ಆದರೆ, ಕಾವ್ಯ ಫ್ಯಾಮಿಲಿ ಆ ನಿಯಮ ಉಲ್ಲಂಘನೆ ಮಾಡಿದೆ. ಅದರಿಂದ ಕಾವ್ಯ ಶೈವ ಕಣ್ಣೀರು ಹಾಕುವಂತೆ ಆಗಿದೆ.
ಇತ್ತೀಚೆಗೆ ಕಾವ್ಯಾ ಅವರ ಸಹೋದರ ಕಾರ್ತಿಕ್ ಹಾಗೂ ತಾಯಿ ಸಾವಿತ್ರಿ ಅವರು ಬಿಗ್ ಬಾಸ್ ಮನೆಗೆ ಬಂದಿದ್ದರು.ಹೊರಗಿನಿಂದ ಬಂದ ಕುಟುಂಬದವರು ಬಿಗ್ ಬಾಸ್ ಮನೆಗೆ ಸಂಬಂಧಿಸಿದ ಹೊರ ಜಗತ್ತಿನ ವಿಷಯಗಳನ್ನು ಇಲ್ಲಿ ಚರ್ಚೆ ಮಾಡುವುದು ಬಿಗ್ ಬಾಸ್ ಮನೆಯ ಮೂಲ ನಿಯಮದ ಉಲ್ಲಂಘನೆ. ಇದನ್ನು ಎಲ್ಲರಿಗೂ ಮೊದಲೇ ತಿಳಿಸಲಾಗಿರುತ್ತದೆ. ಆದರೂ ಕೂಡ ಕಾವ್ಯಾ ಕುಟುಂಬದವರು ಆ ನಿಮಯ ಉಲ್ಲಂಘನೆ ಮಾಡಿದರು. ಗಿಲ್ಲಿ ನಟ ಬಗ್ಗೆ ಅವರು ಗುಟ್ಟಾಗಿ ಮಾತನಾಡಿದರು.
ಜಸ್ಟ್ ಮಾತ್ ಮಾತ್ ಅಲ್ಲಿ ಅನ್ನುವ ಹಾಗೆ ಮಾತಿನ ಮಧ್ಯೆ ಎಲ್ಲವೂ ಶೇರ್ ಆಗಿದೆ. ಇದರಿಂದ ಬಿಗ್ ಬಾಸ್ ರಾಂಗ್ ಆಗಿದ್ದಾರೆ.ನೋಡುವವರಿಗೆ ನೀನು ಆಡುತ್ತಿಲ್ಲ ಅಂತೇನೂ ಕಾಣಿಸುತ್ತಿಲ್ಲ. ನೀನು ಹಾಕುತ್ತಿರುವ ಎಫರ್ಟ್ಸ್ ಕಾಣಿಸುತ್ತಿದೆ. ನೀನು ಜಾಸ್ತಿ ಕಾಣಿಸಿಕೊಳ್ಳಬೇಕು. ತಲೆ ಕೆಡಿಸಿಕೊಳ್ಳಬೇಡ. ನಿನ್ನ ಮತ್ತು ಗಿಲ್ಲಿ ಸ್ನೇಹ ನೆಕ್ಟ್ಸ್ ಲೆವೆಲ್ನಲ್ಲಿ ಇದೆ. ನಾಮಿನೇಷನ್ನಲ್ಲಿ ಅವನ ಹೆಸರು ತೆಗೆದುಕೊಳ್ಳುತ್ತೀಯ. ಆದರೂ ಅವನು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದು ಕಾವ್ಯಾಗೆ ಕಾರ್ತಿಕ್ ಹೇಳಿದರು.
ಇದರಿಂದ ಬಿಗ್ ಬಾಸ್ ರಾಂಗ್ ಆಗಿದ್ದಾರೆ. ನಿಯಮ ಉಲ್ಲಂಘನೆ ಆಗಿದೆ ಅಂತ ಹೇಳಿದ್ದಾರೆ. ಕಾವ್ಯ ಮನೆಯವರನ್ನ ಹೊರಗೆ ಕಳಿಸುವ ಕೆಲಸವನ್ನು ಮಾಡಿದಂತೆ ಇದೆ. ಇದರಿಂದ ಕಾವ್ಯ ಶೈವ ಕಣ್ಣೀರು ಹಾಕುವಂತೆ ಆಗಿದೆ. ಕಾವ್ಯ ಶೈವ ಅವರಿಗೆ ತಪ್ಪಿನ ಅರಿವಾಗಿದೆ. ಆ ಕೂಡಲೆ ಬಿಗ್ ಬಾಸ್ ಬಳಿ ಕ್ಷಮೆನೂ ಕೇಳಿದ್ದಾರೆ.ಕಾವ್ಯ ಕಣ್ಣೀರು ಹಾಕಿದರೂ ಕೂಡ ಬಿಗ್ ಬಾಸ್ ಮನಸ್ಸು ಬದಲಾಗಲಿಲ್ಲ.